ಮಂಗಳೂರು: ಸಿರಿಯಾದ ಪ್ರಿನ್ಸಸ್ ಮಿರಾನ್ ಸರಕು ಸಾಗಾಟದ ಹಡಗು ಉಳ್ಳಾಲ ಬಟಪಾಡಿ ಕಡಲಿನಲ್ಲಿ ಮುಳುಗಿ ತಿಂಗಳು ಸಮೀಪಿಸುತ್ತಿದೆ ಸದ್ಯದ ಪರಿಸ್ಥಿತಿಯಲ್ಲಿ ಆಗಸ್ಟ್ ಅಂತ್ಯದವರೆಗೂ ನೌಕೆಯಿಂದ ತೈಲ ತೆರವು ಮಾಡುವ ಸಾಧ್ಯತೆ ಇಲ್ಲ
ಮುಂಬೈ ಹಾಗೂ ಗೋವಾದಿಂದ 2ಪತ್ಯೇಕ ತಂಡ ಆಗಮಿಸಿ ತೈಲ ತೆರವು ಮತ್ತಿತರ ವಿಚಾರಗಳಿಗೆ ಸಂಬಂಧಿಸಿ ಪರಿಶೀಲಿಸಿ ತೆರಳಿರುವುದು ಬಿಟ್ಟರೆ ಯಾವುದೇ ಬೆಳವಣಿಗೆ ಇಲ್ಲ . ಸದ್ಯದ ಮಟ್ಟಿಗೆ ಹಡಗು ಬಟ್ಟಪ್ಪಾಡಿಯಲ್ಲಿ ನೆಲ ಸ್ಪರ್ಶಿಸಿ ನಿಂತಿದೆ, ಆದರೆ ಪೂರ್ತಿ ಮುಳುಗಿಲ್ಲ ಆದರೆ ಡೆಕ್ ವರೆಗೂ ನೀರು ತುಂಬಿಕೊಂಡಿರುವುದರಿಂದ ಅದೊರಳಗೆ ಪ್ರವೇಶಿಸಲು ತಜ್ಞರ ಕಾರ್ಯಾಚರಣೆಯ ಅಗತ್ಯವಿದೆ, ಈಗಿನ ಪರಿಸ್ಥಿತಿಯಲ್ಲಿ ಕಡಲಿನ ಅಬ್ಬರ ಜೋರಾಗಿರುವುದರಿಂದ ಕಾರ್ಯಾಚರಣೆ ನಡೆಸುವ ಸ್ಥಿತಿ ತಜ್ಞರೇ ಇಲ್ಲ.
ಸದ್ಯ ನೌಕಾಯಾನ ಸಚಿವಾಲಯ ಟಗ್ ಬೋಟ್ ವಾಟರ್ ಲಿಲ್ಲಿ ಯನ್ನು ಮಂಗಳೂರು ಬಂದರಿನಲ್ಲಿ ತಂದು ನಿಲ್ಲಿಸಲಾಗಿದೆ , ತೈಲ ಸೋರಿಕೆಯಾದರೆ ಅದನ್ನು ನಿಯಂತ್ರಿಸುವುದು ಇದರ ಉದ್ದೇಶ. ಅಲ್ಲದೆ ಕೋಸ್ಟ್ ಗಾರ್ಡ್ ನೌಕೆ ಹಾಗೂ ಕರಾವಳಿ ಕಾವಲು ಪೊಲೀಸ್ ಬೋಟ್ ಗಳು ನಿಗಾ ಇರಿಸಿವೆ ಆದರೆ ನಿರಂತರವಾಗಿ ಹಡಗಿನ ಮೇಲೆ ಕಣ್ಗಾವಲು ಸದ್ಯ ನಡೆಸಲಾಗುತ್ತಿಲ್ಲ. ಇಂಥ ಪ್ರಕರಣಗಳಲ್ಲಿ ಸುಧೀರ್ಘವಾಗಿ ಕಣ್ಗಾವಲು ನಡೆಸಲಾಗುವುದು ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ ಇಪ್ಪತ್ತ ಒಂದ ರಂದು ಪಿನ್ಸಸ್ ಮಿನರಲ್ ಹೆಸರಿನ ಸರಕು ನೌಕೆ ಉಳ್ಳಾಲ ಸಮುದ್ರ ತೀರದಲ್ಲಿ ಮುಳುಗಡೆ ಆಗಿತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿ ಈ ನೌಕೆಯಲ್ಲಿದ್ದ ಹದಿನೈದು ಮಂದಿಯನ್ನು ರಕ್ಷಿಸಿದ್ದರು ಈ ಮಂದಿ ಈಗ ಮಂಗಳೂರಿನಲ್ಲಿ ಇದ್ದಾರೆ ಅವರಲ್ಲಿ ದಾಖಲೆ ಸಮಸ್ಯೆಯಿರುವ ಕಾರಣ ಸಿರಿಯಾ ದೇಶಕ್ಕೆ ಕರೆದೊಯ್ಯುವ ಕಾರ್ಯ ಪೂರ್ಣಗೊಂಡಿಲ್ಲ ಎಂದು ತಿಳಿದುಬಂದಿದೆ ಈ ಕುರಿತು ಹಡಗಿನ ಮಾಲಕರ ಪ್ರತಿನಿಧಿಗಳು ನಿರಂತರ ಯತ್ನದಲ್ಲಿದ್ದು ಮುಂದಿನವಾರ ಕರೆದೊಯ್ಯುವ ಸಾಧ್ಯತೆಯಿದೆ.
ಈ ಮಧ್ಯೆ ಸಿರಿಯದ ನೌಕೆ ಮಲೇಷ್ಯದಿಂದ ಇಟಲಿಗೆ ತೆರಳುವ ಮಧ್ಯೆ ಉಳ್ಳಾಲ ಕಡಲ ತೀರಕ್ಕೆ ಬರಲು ಕಾರಣವಾದ ಅಂಶಗಳನ್ನು ಡಿಜಿ ಶಿಪ್ಪಿಂಗ್ ಹಾಗೂ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿವೆ. ಲಭ್ಯ ಮಾಹಿತಿ ಪ್ರಕಾರ ಶ್ರೀಲಂಕ ಮಾರ್ಗವಾಗಿ ತೆರಳುವ ವೇಳೆ ನೌಕೆಯ ತಳಭಾಗದಲ್ಲಿ ರಂಧ್ರ ಕಾಣಿಸಿದ ಕಾರಣ ಕಡಲತೀರದ ಮಾರ್ಗವಾಗಿ ಪ್ರಯಾಣ ಬೆಳೆಸಿತ್ತು ಇದರಿಂದಾಗಿ ಉಳ್ಳಾಲ ಸಮುದ್ರ ತೀರ ತಲುಪಿದೆ ಎನ್ನುವುದು ವರದಿಯ ಮುಖ್ಯಾಂಶ.