ಮಂಗಳೂರು: ಪ್ಯಾರಾ ಮೆಡಿಕಲ್ ಕೋರ್ಸ್ನ ಕೌನ್ಸೆಲಿಂಗ್ ಕೂಡಾ ಆಗಿಲ್ಲ. ಮ್ಯಾನೇಜ್ಮೆಂಟ್ ಸೀಟ್ ಫುಲ್ ಮಾಡಲು ಅವಕಾಶ ಮಾಡಿಕೊಟ್ಟು ಕ್ಲಾಸ್ ಆರಂಭಿಸಿದ್ದಾರೆ. ಆದ್ರೆ ಅಪ್ಲಿಕೇಶನ್ ಹಾಕಿ ಸೀಟಿಗಾಗಿ ಕಾಯ್ತಾ ಇರೋ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ ಎಂದು ಮಾಜಿ ಸಚಿವ ಯುಟಿ ಖಾದರ್ ಕಿಡಿಕಾರಿದ್ದಾರೆ.
ಮಂಗಳೂರು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೂಡಲೇ ಪ್ಯಾರಾ ಮೆಡಿಕಲ್, ನೀಟ್ ಕೌನ್ಸಿಲಿಂಗ್ ಮಾಡಲು ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ದ್ವಿತೀಯ ಪಿಯುಸಿ ಪರೀಕ್ಷೆ ಆದ ನಂತರ ನಮ್ಮಲ್ಲಿ ಫಲಿತಾಂಶ ಲೇಟಾಗಿ ಬರ್ತದೆ. ಹೀಗಾಗಿ ಕೌನ್ಸಿಲಿಂಗ್ ಅಲ್ಲದವ್ರು ಬೇರೆ ಕೋರ್ಸ್ ಗೆ ಹೋಗಲು ಆಗಲ್ಲ. ಆಗ ಕೇರಳ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಅಡ್ಮಿಶನ್ ಮಾಡಿಸ್ತಾರೆ ಅಂದ್ರು. ವಿದ್ಯಾರ್ಥಿಗಳ ನೋವನ್ನು ಸರ್ಕಾರ ಅರಿತುಕೊಳ್ಳಬೇಕು ಎಂದು ಆಗ್ರಹಿಸಿದರು.