News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಲುವಾಗಿ ಸಂಭ್ರಮದ ನಡಿಗೆ ಕಾಯ೯ಕ್ರಮ

The amrit mahotsav of independence day celebrations is a celebration of the celebrations.
Photo Credit : News Kannada

ಮಂಗಳೂರು:  ಮಹಾನಗರಪಾಲಿಕೆಯ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಲುವಾಗಿ ದಿನಾಂಕ: 10-08-2022 ರಿಂದ ನಿರಂತರ ಕಾಯ೯ಕ್ರಮವನ್ನು ಹಮ್ಮಿಕೊಂಡಿದ್ದು ಸ್ವಾತಂತ್ರ್ಯೋತ್ಯ ಹೋರಾಟಗಾರರಿಗೆ ನುಡಿ ನಮನ, ಸಾವ೯ಜನಿಕರಿಗೆ ರಂಗೋಲಿ ಸ್ಪಧೆ೯ ಮುಂತಾದ ಕಾಯ೯ಕ್ರಮವನ್ನು ಆಯೋಜಿಸಲಾಗಿತ್ತು. ಅದೇ ರೀತಿ ದಿನಾಂಕ: 12-08-2022 ರ ಪೂವಾ೯ಹ್ನ 10.00 ಗಂಟೆಗೆ ಸಂಭ್ರಮದ ನಡಿಗೆ ಕಾಯ೯ಕ್ರಮವನ್ನು ಆಯೋಜಿಸಲಾಗಿತು.

ಈ ಸಂಭ್ರಮದ  ನಡಿಗೆ ಮಂಗಳೂರು ಮಹಾನಗರಪಾಲಿಕೆಯಿಂದ ಹೊರಟು ಲಾಲ್ ಭಾಗ್ ವೃತ್ತ, ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತವಾಗಿ ಮಣ್ಣಗುಡ್ಡೆ ಕೆನರಾ ಉವ೯ ಶಾಲೆ ರಸ್ತೆಯಾಗಿ ಮಂಗಳೂರು ಮಹಾನಗರಪಾಲಿಕೆಗೆ ಹಿಂದಿರುಗಿತು. ಈ ಕಾಲ್ನಡಿಗೆ ಜಾಥವು ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಶ್ರೀ ಪ್ರೇಮಾನಂದ ಶೆಟ್ಟಿ ಯವರ ನೇತೃತ್ವದಲ್ಲಿ ಜರಗಿದ್ದು, ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ್ ಕಾಮಾತ್, ಉಪಮೇಯರ್ ಸುಮಂಗಳಾ ರಾವ್, ಪಾಲಿಕೆಯ ಆಯುಕ್ತರಾದ ಅಕ್ಷಯ್ ಶ್ರೀಧರ್, ಮುಖ್ಯ ಸಚೇತಕ ಸುಧೀರ್ ಶೆಟ್ಟಿ, ಪಾಲಿಕೆಯ ಎಲ್ಲಾ ಸದಸ್ಯರುಗಳು, ಅಧಿಕಾರಿ ಮತ್ತು ಸಿಬ್ಬಂದಿಗಳು ಮತ್ತು ಪೌರಕಾಮಿ೯ಕರು ಹಾಗೂ ವಿವಿಧ ಶಾಲೆಯ ವಿದ್ಯಾಥಿ೯ಗಳು ಮತ್ತು ಮುಖ್ಯಸ್ಥರು ಭಾಗವಹಿಸಿದ್ದರು.

“ಸಂಭ್ರಮದ ನಡಿಗೆ” ಕಾಯ೯ಕ್ರಮದ ಮೊದಲು ಅತಿಥಿಗಳು ಪಾಲಿಕೆ ವತಿಯಿಂದ ಪಿ.ಎಂ ಸ್ವನಿಧಿ ಯೋಜನೆಯಡಿ ಇಬ್ಬರು ಸಾವ೯ಜನಿಕರಿಗೆ ಧನ ಸಹಾಯದ ಚೆಕ್ ಅನ್ನು ಹಸ್ತಾಂತರ ಮಾಡಿದರು. ನಗರದಲ್ಲಿ ಸ್ವಚ್ಚತೆ ಕಾಯ೯ ಕೈಗೊಳ್ಳುವ ಪಾಲಿಕೆಯ ಪೌರ ಕಾಮಿ೯ಕರುಗಳಿಗೆ ಮಾನ್ಯ ಮುಖ್ಯಮಂತ್ರಿಗಳ ಹಸ್ತಾಕ್ಷರವುಳ್ಳ ಪ್ರಶಂಸನೀಯ ಪತ್ರವನ್ನು ಹಸ್ತಾಂತರಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು