ಮಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಹಾಡುಹಗಲೇ ಇಸ್ಲಾಂ ಭಯೋತ್ಪಾದಕರು ಟೈಲರ್ ವೃತ್ತಿಯ ಬಹುಸಂಖ್ಯಾತ ಹಿಂದೂ ಸಮುದಾಯದ ಕನಯ್ಯಾ ಲಾಲ್ ಎಂಬವರ ಶಿರಚ್ಛೇದನ ಮಾಡಿದ ಗೌಸ್ ಮಹ್ಮದ್ ಹಾಗೂ ರಿಯಾಜ್ ಇಸ್ಲಾಮ್ ಭಯೋತ್ಪಾದಕರ ಕೃತ್ಯವನ್ನು ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ತೀವ್ರವಾಗಿ ಖಂಡಿಸುತ್ತದೆ .
ಈ ಕೃತ್ಯವನ್ನು ಖಂಡಿಸಿ ಮಾತನಾಡಿದ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷರಾದ ರಾಜೇಶ್ ಪವಿತ್ರನ್ ಅವರು ಗೌಸ್ ಮಹ್ಮದ್ ರಿಯಾಜ್ ರನ್ನು ಯಾವುದೇ ಮುಲಾಜಿಲ್ಲದೆ ಗಲ್ಲಿಗೇರಿಸಬೇಕೆಂದು ಹಾಗೂ ಈ ಕೃತ್ಯ ಎಸಗಿದವರು ಪರವಾಗಿ ಯಾರೂ ವಕಾಲತ್ತು ವಹಿಸಬಾರದೆಂದು ಒಂದ್ವೇಳೆ ಇದ್ದರೆ ಅಂಥವರ ಮೇಲೂ ಪ್ರಕರಣ ದಾಖಲಿಸಬೇಕೆಂದು ಆಕ್ರೋಶಭರಿತರಾಗಿ ನುಡಿದರು.