ಮಂಗಳೂರು: ಪುತ್ತೂರು ವಿಧಾನಸಭಾ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಕಾಂಗ್ರೆಸ್ನಿಂದ ಅಶೋಕ್ ಕುಮಾರ್ ರೈ, ಆಶಾ ತಿಮ್ಮಪ್ಪ ಗೌಡ, ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ನಡುವೆ ತೀವ್ರ ಸ್ಪರ್ಧೆ ಇದೆ. ಪುತ್ತೂರಿನಲ್ಲಿ ತಮ್ಮದೇ ಆದ ಬೆಂಬಲಿಗರನ್ನು ಹೊಂದಿ ಬಿಜೆಪಿಗೆ ಟಕ್ಕರ್ ಕೊಡಲು ಅರುಣ್ ಪುತ್ತಿಲ ಸಜ್ಜಾಗಿದ್ದಾರೆ.
ಅಲ್ಲದೆ ನಾಮಪತ್ರ ಸಲ್ಲಿಸುವ ವೇಳೆ ಸೇರಿದ ಜನಸಂದಣಿ ನೋಡಿ ಬಿಜೆಪಿ ಪಾಳಯ ದಂಗಾಗಿದೆ. ಇದೀಗ ಎದುರಾಳಿಗಳಿಗೆ ಮತ್ತೊಂದು ಶಾಕ್ ನೀಡಲು ಅರುಣ್ ಪುತ್ತಿಲ ಸಜ್ಜಾಗಿದ್ದಾರೆ. ಏ. 28 ರಂದು ಸಾವಿರಕ್ಕೂ ಅಧಿಕ ಮಹಿಳೆಯರನ್ನು ಒಟ್ಟುಗೂಡಿಸಿ ಬೃಹತ್ ಸಮಾವೇಶಕ್ಕೆ ಪುತ್ತಿಲ ಕೈ ಹಾಕಿದ್ದಾರೆ.
ಈ ನಿಟ್ಟಿನಲ್ಲಿ ಸೋಮವಾರ ಸಂಜೆ ಈ ಸಂಬಂಧ ಪೂರ್ವಭಾವಿ ಸಭೆ ನಡೆದಿದ್ದು, ಹಲವು ಪ್ರಮುಖ ಹಿಂದು ಮುಖಂಡರು ಭಾಗಿಯಾಗಿದ್ದರು.