ಮಂಗಳೂರು: ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಯೆನೆಪೋಯ ಪರಿಗಣಿಸಾಲ್ಪಟ್ಟ ವಿಶ್ವವಿದ್ಯಾನಿಲಯ, ಸಮುದಾಯ ಆರೋಗ್ಯ ವಿಭಾಗ ಯೆನೆಪೋಯ ವೈದ್ಯಕೀಯ ಕಾಲೇಜು ಇದರ ಜಂಟಿ ಆಶ್ರಯದಲ್ಲಿ, ಬಂದರ್ ಅಜೀಜುದ್ದೀನ್ ರಸ್ತೆಯ ನಗರ ಆರೋಗ್ಯ ಕೇಂದ್ರದಲ್ಲಿ ಉಚಿತ ಮದುಮೇಹ ತಪಾಸನ ಶಿಬಿರವನ್ನು ಅಯೋಜಿಸಲ್ಲಾಯ್ತು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರಪಾಲಿಕೆಯ ಆರೋಗ್ಯ ಅಧಿಕಾರಿ ಡಾ ಮಂಜಯ್ಯ ಶೆಟ್ಟಿ ಹಾಗು ಸ್ಥಳೀಯ ಕಾರ್ಪೊರೇಟರ್ ಶ್ರೀಮತಿ ಜೀನತ್ ಶಂಶುದ್ದೀನ್, ಮಧುಮೇಹ ತಜ್ನಾ – ಡಾ ಶ್ರೀಕೃಷ್ಣ ಆಚಾರ್ಯ, ಯೆನೆಪೋಯ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ – ಡಾ ಮುಹಮ್ಮದ್ ತಾಹಿರ್, ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥೆ – ಡಾ ಪೂನಂ ಆರ್ ನಾಯಕ್ ರವರು ಉಪಸ್ಥಿತರಿದರು.
ಮಾಜಿ ಮೇಯರ್ – ಶ್ರೀ ಅಶ್ರಫ್ರವರು ಸಮಯೋಚಿತವಾಗಿಮಾತಾನಾಡಿದರು. ಮದುಮೇಹ ತಾಪಾಸನದ ತಜ್ಞರಾದ ಡಾ|ಶ್ರೀಕೃಷ್ಣ ಆಚಾರ್ಯರವರು ರೋಗಿಗಳಿಗೆ ರೊಗದ ಕೆಲವು ಗುಣ ಲಕ್ಷಣಗಳನ್ನು ವಿವರಿಸಿ ಮುಂಜಾಗ್ರತ ಕ್ರಮವನ್ನು ತಿಳಿಸಿದರು .
ಅಧಿಕ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಪಾಲ್ಗೊಂಡು ಶಿಬಿರದ ಸದುಪಯೋಗವನ್ನು ಪಡೆದರು.