ಮಂಗಳೂರು: ಎ.ಜೆ. ಗ್ರ್ಯಾಂಡ್ ಹೋಟೆಲ್ ನಲ್ಲಿ ಒಂದು ದಿನದ ಹೃದ್ರೋಗ ಕಾರ್ಯಾಗಾರ ಸ್ಪೆಕ್ಟ್ರಮ್ – ೨೦೨೩ ೭ ಜನವರಿ ೨೦೨೩ ರಂದು ನಡೆಯಿತು.
ಇದು ೨೦೧೨ ರಲ್ಲಿ ಪ್ರಾರಂಭವಾದ ಕಾರ್ಯಾಗಾರದ ೧೨ ನೇ ಆವೃತ್ತಿಯಾಗಿದೆ. ಕಾರ್ಯಾಗಾರದಲ್ಲಿ ಹೃದ್ರೋಗ ತಜ್ಞರು, ವೈದ್ಯರು, ಕಾರ್ಡಿಯಾಲಜಿ ಮತ್ತು ಮೆಡಿಸಿನ್ ಸ್ನಾತಕೋತ್ತರ ಪದವೀಧರರು ಸೇರಿದಂತೆ ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಸುಮಾರು ೨೫೦ ಪ್ರತಿನಿಧಿಗಳು ಭಾಗವಹಿಸಿದ್ದರು.
ದೇಶದ ಗಣ್ಯರು ಹಾಗೂ ಅಂತಾರಾಷ್ಟ್ರೀಯ ಪ್ರತಿನಿಧಿಗಳೂ ಆಗಮಿಸಿದ್ದರು. ಕಾರ್ಯಕ್ರಮವು ಹೃದ್ರೋಗಶಾಸ್ತ್ರದ ವಿವಿಧ ಕ್ಷೇತ್ರಗಳಲ್ಲಿ ಉಪನ್ಯಾಸಗಳು, ಚರ್ಚೆಗಳು ಮತ್ತು ಸಂವಾದಗಳನ್ನು ಒಳಗೊಂಡಿದೆ.
ಡಾ. ಬಿ. ವಿ. ಮಂಜುನಾಥ್, ಮುಖ್ಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್, ಎ.ಜೆ. ಆಸ್ಪತ್ರೆ ಮತ್ತು ಹೃದ್ರೋಗಶಾಸ್ತ್ರದ ಎ.ಜೆ. ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ, ಮಂಗಳೂರು ಇವರು ಸಮ್ಮೇಳನದ ಸಂಘಟನಾ ಅಧ್ಯಕ್ಷರಾಗಿದ್ದಾರೆ. ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್, ಡಾ. ಆರ್.ಪುರುಷೋತ್ತಮ್, ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ. ವೈಜ್ಞಾನಿಕ ಸಮಿತಿಯಲ್ಲಿ ಇಂಟರ್ವೆನ್ಷನಲ್ ಹೃದ್ರೋಗ ತಜ್ಞ ಡಾ. ಪ್ರವೀಣ್ ಜೆ. ಶೆಟ್ಟಿ ಮತ್ತು ಡಾ. ನಿತಿನ್ ಥಾಮಸ್ ಟೆರನ್ಸ್, ಹೃದಯ ರಕ್ತನಾಳದ ಶಸ್ತ್ರಚಿಕಿತ್ಸಕ ಡಾ. ಜಯಶಂಕರ್ ಮಾರ್ಲ ಮತ್ತು ಡಾ. ಸಂಭ್ರಮ್ ಶೆಟ್ಟಿ, ಮಕ್ಕಳ ಹೃದ್ರೋಗ ತಜ್ಞ ಡಾ. ಪ್ರೇಮ್ ಆಳ್ವ ಮತ್ತು ಹೃದ್ರೋಗ ಅರಿವಳಿಕೆ ತಜ್ಞ ಡಾ. ಗುರುರಾಜ್ ತಂತ್ರಿ ಭಾಗವಹಿಸಿದ್ದರು.