ಮಂಗಳೂರು: ತಂದೆಯೇ ತನ್ನ ಮೂವರು ಮಕ್ಕಳನ್ನು ಬಾವಿಗೆ ನೂಕಿ ಕೊಂದ ಧಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಪಚ್ಚಳೂರು ಬಳಿ ಗುರುವಾರ ಸಂಜೆ ಸಂಭವಿಸಿದೆ.
ದಶ್ಚಿ ತಾ(14), ಉದಯ್(11) ಮತ್ತು ದಕ್ಷಿತ್ (4) ಮೃತ ಮಕ್ಕಳು ತಂದೆ ವಿಜೇತ್ ಶೆಟ್ಟಿ ಆರೋಪಿ ಬೆಳಗ್ಗೆ ಶಾಲೆಗೆ ಹೋಗಿದ್ದ ಮಕ್ಕಳು ಮನೆಗೆ ಬರುತ್ತಿದ್ದಂತೆ ಅವರನ್ನು ಕರೆದೊಯ್ದು ಬಾವಿಗೆ ನೂಕಿ ಕೊಂದಿದ್ದಾನೆ. ಬಳಿಕ ಮನೆಗೆ ಬಂದಿದ್ದಾನೆ. ಮಕ್ಕಳು ಎಲ್ಲಿ? ಎಂದು ಪತ್ನಿ ಲಕ್ಷ್ಮೀ ಕೇಳಿದಾಗ ಎಲ್ಲೋ ಅವಿತುಕೊಂಡು ಆಟವಾಡುತ್ತಿರಬೇಕು ಎಂದು ಸುಳ್ಳು ಹೇಳಿದ್ದಾನೆ.
ಅನುಮಾನಗೊಂಡ ಪತ್ನಿ ಸಮೀಪದ ಬಾವಿ ಬಳಿಗೆ ಬಂದು ನೋಡುತ್ತಿದ್ದಂತೆ ಆಕೆಯನ್ನೂ ಬಾವಿಗೆ ತಳ್ಳಲು ಯತ್ನಿಸಿದ್ದಾನೆ. ನೀನು ಸಾಯಬೇಕು, ಸಾಯು ಎನ್ನುತ್ತಾ ಆಕೆಯನ್ನೂ ನೂಕಿ, ಬಾವಿಗೆ ತಾನೂ ಹಾರಿದ್ದಾನೆ ಅಷ್ಟರಲ್ಲಿ ಸ್ಥಳಕ್ಕೆ ಬಂದ ಸ್ಥಳೀಯರು ಗಂಡ ಹೆಂಡತಿ ಇಬ್ಬರನ್ನೂ ರಕ್ಷಿಸಿದ್ದಾರೆ. ಮಕ್ಕಳು ಮೃತಪಟ್ಟಿದ್ದಾರೆ ಮಂಗಳೂರು ಉತ್ತರ ಎಸಿಪಿ ಮಹೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮುಲ್ಕಿ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ.