ಮಂಗಳೂರು: 59ನೇ ಜೆಪ್ಪು ವಾರ್ಡಿನ ಸೂಟರ್ಪೇಟೆ ಪ್ರದೇಶದ ಅಭಿವೃದ್ಧಿಗೆ 50 ಲಕ್ಷ ರೂ.ಗಳ ವಿಶೇಷ ಅನುದಾನದ ಕಾಮಗಾರಿಗಳಿಗೆ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮಂಗಳವಾರ ಚಾಲನೆ ನೀಡಿದರು.
ಕೋಡ್ದಬ್ಬು ದೈವಸ್ಥಾನದ ಪರಿಸರದ ರಸ್ತೆ ಅಭಿವೃದ್ಧಿ, ಶಿಥಿಲಗೊಂಡಿರುವ ಗ್ರಂಥಾಲಯ, ಅಂಗನವಾಡಿ, ಮಹಿಳಾ ಮಂಡಲದ ಕೊಠಡಿ ಪುನರ್ ನಿರ್ಮಾಣಕ್ಕೆ ಈ ಅನುದಾನ ಬಳಕೆಯಾಗಲಿದೆ ಎಂದು ಶಾಸಕರು ತಿಳಿಸಿದರು.
ಪಾಲಿಕೆಯ 59ನೇ ವಾರ್ಡ್ ಸದಸ್ಯ ಭರತ್ ಕುಮಾರ್, ಸ್ಥಳೀಯ ಸಮಸ್ಯೆ ಮತ್ತು ಆಗಬೇಕಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಕ್ಕೆ ತಂದಿದ್ದರು. ಅದರಂತೆ ರಾಜ್ಯ ಸರಕಾರದ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ 50 ಲಕ್ಷ ರೂ. ಮಂಜೂರಾಗಿದ್ದು ಈ ಅನುದಾನದಲ್ಲಿ ಕಾಮಗಾರಿ ನಡೆಸಲಾಗುತ್ತದೆ ಎಂದು ಶಾಸಕ ಕಾಮತ್ ಹೇಳಿದರು.
ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಗರಕ್ಕೆ ಬಂದಾಗ ನಗರದ ಅಬಿವೃದ್ಧಿ ಯೋಜನೆಗಳಿಗಾಗಿ ಅನುದಾನ ನೀಡುವಂತೆ ಮನವಿ ಮಾಡಿದ್ದೆ. ಅದರಂತೆ 125 ಕೋಟಿ ರೂ. ಅನುದಾನ ಬಿಡುಗಡೆಗೆ ಆದೇಶ ಕೊಟ್ಟಿದ್ದರು.
ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೂಡ ಬಹಳ ಮುತುವರ್ಜಿ ವಹಿಸಿ ಅನುದಾನ ಬಿಡುಗಡೆ ಮಾಡಿದ್ದಾರೆ. ಅವರಿಗೂ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಶಾಸಕರು ಸ್ಮರಿಸಿಕೊಂಡರು.
1.25 ಲಕ್ಷ ರೂ ವೆಚ್ದದಲ್ಲಿ ಜೆಪ್ಪು ಬಪ್ಪಾಲ್ನಲ್ಲಿ ಚರಂಡಿ ನಿರ್ಮಾಣ, 50 ಲಕ್ಷ ರೂ ವೆಚ್ಚದಲ್ಲಿ ಗ್ರಂಥಾಲಯ, ಅಂಗನವಾಡಿ, ಮಹಿಳಾ ಮಂಡಲ ಕಟ್ಟಡ ನಿರ್ಮಾಣ ನಡೆಯಲಿದೆ. ಈ ಪರಿಸರದ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯ, ಮಹಿಳಾ ಮಂಡಲಕ್ಕೆ ಕಚೇರಿ ನಿರ್ಮಿಸಲಾಗುತ್ತಿದೆ ಎಂದರು.
ಮನಪಾ ಸದಸ್ಯರಾದ ಶ್ರೀ ಭರತ್ ಕುಮಾರ್ ಎಸ್, ಮಂಡಲದ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುರೇಖಾ ರಾವ್, ಬೂತ್ ಅಧ್ಯಕ್ಷರಾದ ದೇವಾನಂದ್ ಸನಿಲ್, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅಜಿತ್ ಡಿಸಿಲ್ವ, ಮಂಡಲದ ಯುವ ಮೋರ್ಚಾ ಉಪಾಧ್ಯಕ್ಷರಾದ ಘನಶ್ಯಾಮ್ ಅತ್ತಾವರ್, ಶಕ್ತಿಕೇಂದ್ರ ಪ್ರಮುಖರಾದ ಪ್ರಕಾಶ್ ಕೊಟ್ಟಾರಿ, ಬೂತ್ ಅಧ್ಯಕ್ಷರಾದ ವಾಣಿಶ್ರೀ, ಪ್ರಮುಖರಾದ ವಸಂತ್ ಜೆ ಪೂಜಾರಿ, ನಾರಾಯಣ, ತಾರಮಾಣಿ, ಪದ್ಮಾಕರ್, ಶಿವಾನಂದ ರೈ, ಅಮಿತಾ ಕೆ, ಮಂಗಳೂರು ನಗರ ಶಿಶು ಅಭಿವೃದ್ಧಿ ಯೋಜನೆ ಸೂಪರ್ ವೈಸರ್ ಅನುಪಮಾ.ಸಿ, ಅಂಗನವಾಡಿ ಶಿಕ್ಷಕಿ ವಸಂತಿ.ಕೆ , ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕರಾದ ರಾಘವೇಂದ್ರ ಕೆ.ವಿ ಹಾಗೂ ಸಿಬ್ಬಂದಿಗಳಾದ ಮಮತಾ ರೈ, ಸವಿತಾ, ಬಿ.ವಿಶುಕುಮಾರ್ ಹಾಗೂ ಸುಮಿತ್ರಾ ಇವರು ಹಾಜರಿದ್ದರು.