ಮಂಗಳೂರು: ಗೆಳೆಯರ ಸಹಭಾಗಿತ್ವದಲ್ಲಿ ಹಿಂದೂಗಳೇ ಆಯೋಜಿಸಿದ್ದ ‘ರಂಗ್ ದ ಬರ್ಸ ಕಾರ್ಯಕ್ರಮಕ್ಕೆ ಕುಟುಂಬ ಸಹಿತ ಭಾಗವಹಿಸುವ ಕಲ್ಪಿಸಿ ಪೊಲೀಸರಿಂದ ಅನುಮತಿಯನ್ನೂ ಪಡೆದುಕೊಳ್ಳಲಾಗಿತ್ತು. ಹಾಗಿದ್ದರೂ ಕಾರ್ಯಕ್ರಮಕ್ಕೆ ಕಿಡಿಗೇಡಿಗಳು ಆಗಮಿಸಿ” ಅಡ್ಡಿ ಪಡಿಸಿ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಕಾರ್ಯಕ್ರಮ ಆಯೋಜಕ ಜೀವನ್ ಹೇಳಿದ್ದಾರೆ.
ನಗರದ ಓಪನ್ ಗೌಂಡ್ನಲ್ಲಿ ಮುಚ್ಚು ಮರೆ ಇಲ್ಲದೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೋಲಿ ಹಿಂದೂ ಧಾರ್ಮಿಕ ಆಚರಣೆ. ಮಂಗಳೂರು ಎಜುಕೇಶನ್ ಹಬ್ ಆಗಿರುವ ಕಾರಣ ನಾನಾ ರಾಜ್ಯಗಳಿಂದ ಬಂದು ಇಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಹಾಗೂ ಕುಟುಂಬ ಸಮೇತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.
ಇದು ಆರನೇ ವರ್ಷದ ಕಾರ್ಯಕ್ರಮ, ಸಾಂಪ್ರದಾಯಿಕ ಹೋಲಿಯನ್ನು ಸ್ವಲ್ಪ ಮನರಂಜನಾತ್ಮಕವಾಗಿ ನಾವು ಆಯೋಜಿಸುತ್ತಾ ಬಂದಿದ್ದೇವೆಯೇ ವಿನಹ ಇಲ್ಲಿ ಯಾವುದೇ ರೀತಿಯ ಅನೈತಿಕತೆಗೆ ಅವಕಾಶವಿಲ್ಲ. ಕಳೆದ ತಿಂಗಳು ಕಾರ್ಯಕ್ರಮ ಆಯೋಜಿಸಲಾಗಿತ್ತಾದರೂ ಬಿಸಿಗಾಳಿಯ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಿ, ಮಾ. 26 ರಂದು ಆಯೋಜಿಸಲಾಗಿತ್ತು.
ಮನರಂಜನೆಯ ಜತೆಗೆ ಇದು ಸ್ಟೇಜ್ ಸೆಟ್ಟಿಂಗ್, ಧ್ವನಿವರ್ದಕ, ಕ್ಯಾಟರಿಂಗ್, ಸಂಗೀತಗಾರರು, ವಿವಿಧ ಸ್ಟಾಲ್ಗಳವರಿಗೆ ಉದ್ಯೋಗದ ಯಾವುದೇ ಸಂಘಟನೆಯವರು ಎನ್ನಲಾದ ಅವಕಾಶವೂ ಇದಾಗಿತ್ತು. ಕಾರ್ಯಕ್ರಮದ ಟಿಕೆಟ್ಗಳು ಕೂಡಾ ಆನ್ಲೈನ್ನಲ್ಲಿ ಮಾರಾಟವಾಗಿತ್ತು. ಹೀಗಿರುವಾಗ ಕಿಡಿಗೇಡಿಗಳು ಕಾರ್ಯಕ್ರಮ ಹಾಳುಗೆಡವುದಾದರೆ ಇಲ್ಲಿ ಕಾನೂನು ವ್ಯವಸ್ಥೆ ಯಾವ ಮಟ್ಟಿಗೆ ತಲುಪಿದೆ ಎಂದವರು ಪ್ರಶ್ನಿಸಿದರು.