ಮಂಗಳೂರು: ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಉರ್ವಸ್ಟೋರ್ ಮಂಗಳೂರು ಇದರ ಆಶ್ರಯದಲ್ಲಿ ನಡೆಯುವ ಎರಡು ದಿನಗಳ “ಲೀಡ್ ಟು ವಿನ್” ಸ್ವಸ್ತಿಕ ಲೀಡರ್ ಶಿಪ್ ಬೂಟ್ ಕ್ಯಾಂಪ್- 2022 ಎಂಬ ಕಾರ್ಯಗಾರದ ಉದ್ಘಾಟನಾ ಸಮಾರಂಭವು ಸಂಪ್ಟೆಂಬರ್ 30ನೇ ಶುಕ್ರವಾರ ಬೆಳ್ಳಿಗ್ಗೆ 9.30 ರಿಂದ ಹೋಟೇಲ್ ಎ.ಜೆ. ಗ್ರಾಂಡ್ ಮಂಗಳೂರು ಇಲ್ಲಿ ನಡೆಯಲಿದೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಆರ್. ಡಿ. ಕಿಣಿ ಯವರಿಗೆ ’ಸ್ವಸ್ತಿಕ ಉದ್ಯಮ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು
ಕಾರ್ಯಾಗಾರವನ್ನು ಸೋಮಯ್ಯಾಜಿ ಎಸ್ಟೇಟ್ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಡಿ. ರಘುನಾಥ್ ಸೋಮಯ್ಯಾಜಿ ಹಾಗೂ ಬೆಲ್ ಪೈಂಟ್ಸ್ ಮಾಲಕರಾದ ಆರ್. ಡಿ. ಕಿಣಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಮಂಗಳಾ ಹಾಸ್ಪಿಟಲ್ ನ ವೈದ್ಯಕೀಯ ನಿರ್ದೇಶಕರಾದ ಡಾ.ಗಣಪತಿ ಪಿ. ಅವರು ಭಾಗವಹಿಸುವರು.
ಸಂಪನ್ಮೂಲ ವ್ಯಕ್ತಿಗಳಾಗಿ ಇಬ್ಬರು ಗಣ್ಯ ಸಂಚಾಲಕರಾದ ಸಂಧ್ಯಾ ವರ್ಮ ಮತ್ತು ರಾಕೇಶ್ ನಾಯರ್ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ, ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ. ರಾಘವೇಂದ್ರ ಹೊಳ್ಳ ಎನ್ ರವರು ಪ್ರ ಕಟಣೆಯಲ್ಲಿ ತಿಳಿಸಿದ್ದಾರೆ.