ಮಂಗಳೂರು: ನಗರದಲ್ಲಿ ವಿಲೇವಾರಿಯಾಗದ ಕಸ ಕುರಿತು ಫೇಸ್ಬುಕ್ನಲ್ಲಿ ವ್ಯಂಗ್ಯಾತ್ಮಕ ಪೋಸ್ಟ್ ಹಾಕಿದ್ದ ಸಮಾಜ ಸೇವಕ ಶ್ರೀನಿವಾಸನ್ ನಂದಗೋಪಾಲ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ.
ಮಂಗಳೂರು ಮಹಾನಗರ ಪಾಲಿಕೆಯು ಮೂರು ವಾರಗಳಿಂದ ಕಸ ಸಂಗ್ರಹಿಸಲು ವಿಫಲವಾಗಿರುವ ಕುರಿತು ಶ್ರೀನಿವಾಸನ್ ವ್ಯಂಗ್ಯ ಪೋಸ್ಟ್ ಹಾಕಿದ್ದು, ನಂದಗೋಪಾಲ್ ಅವರಿಗೆ ಕರೆ ಮಾಡಿದ್ದ ವ್ಯಕ್ತಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ನಂದಗೋಪಾಲ್ ಪೊಲೀಸ್ ದೂರು ದಾಖಲಿಸಿದ್ದಾರೆ.