ಮಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರೋ ವಿದೇಶಿ ನಾಗರಿಕರ ಮೇಲೆ ಕ್ರಮಕ್ಕೆಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ಬೆನ್ನಲ್ಲೇ ಮಂಗಳೂರು ಪೊಲೀಸರು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಮಂಗಳೂರಿನಲ್ಲಿ ಹಲವೆಡೆ ಕೆಲಸ ಮಾಡುತ್ತಿದ್ದ 518 ಅಕ್ರಮ ವಿದೇಶಿ ನಾಗರಿಕರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ವಿದೇಶಿ ನಾಗರಿಕರರನ್ನು ಮಂಗಳೂರಿನ ಖಾಸಗಿ ಸಭಾಂಗಣದಲ್ಲಿ ಕಮಿಷನರ್ ಶಶಿಕುಮಾರ್ ನೇತೃತ್ವದಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಿಹಾರ, ಒರಿಸ್ಸಾ, ಅಸ್ಸಾಂ, ಉತ್ತರಪ್ರದೇಶ ಭಾಗದವರೆಂದು ಹೇಳಿಕೊಂಡಿದ್ದಾರೆ.
518 ಜನರಲ್ಲಿ ಹಲವರು ಬಾಂಗ್ಲಾದೇಶ ಮೂಲದವರು ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು,ಎಲ್ಲರ ಮೊಬೈಲ್ ಕರೆಗಳ ದಾಖಲೆ ಮತ್ತು ಬ್ಯಾಂಕ್ ಖಾತೆ ಮಾಹಿತಿ ಸಂಗ್ರಹ, ವಿಳಾಸ ದಾಖಲೆ, ಊರು, ಕೆಲಸ ಮಾಡುವ ಸಂಸ್ಥೆ, ಉಳಿದುಕೊಂಡ ಜಾಗದ ಬಗ್ಗೆ, ಬ್ಯಾಂಕ್ ಖಾತೆಯಲ್ಲಿ ಅನುಮಾನಸ್ಪದ ಹಣ ವರ್ಗಾವಣೆ, ಐಡಿ ಕಾರ್ಡ್ ನಕಲಿ ಮಾಡಿದ್ದರ, ಮೊಬೈಲ್ ನಲ್ಲಿರೋ ಫೋಟೋಗಳ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದಾರೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 18 ತಂಡ ರಚಿಸಿ ಕಾರ್ಯಾಚರಣೆ ಸುಮಾರು 4 ಸಾವಿರ ಜನರ ಪೈಕಿ ಸೂಕ್ತ ದಾಖಲೆ ಕೊಡದ 518 ಜನರನ್ನು ತೀವ್ರ ವಿಚಾರಣೆ ಒಳಪಡಿಸಿದ್ದಾರೆ. ದಾಖಲೆ ಇಲ್ಲದೇ ಅಕ್ರಮವಾಗಿ ನೆಲೆಸಿರುವ ವಿದೇಶಿ ನಾಗರಿಕರು ಅಂತ ಕಂಡು ಬಂದ್ರೆ ಕ್ರಮ ಎಂದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.