ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ಗೆ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ವತಿಯಿಂದ ನೀಡಲಾಗುವ ಇಂಧನ ಸಂರಕ್ಷಣೆ ಕ್ರಮಗಳಿಗಾಗಿ ಟಾಪ್ ಪರ್ಫಾರ್ಮರ್ ಪ್ರಶಸ್ತಿ ದೊರೆತಿದೆ. ಪಿಎಟಿ (ಕಾರ್ಯಕ್ರಮ, ಸಾಧನೆ ಮತ್ತು ವ್ಯಾಪಾರ) ಸಮರ್ಥ ಅನುಷ್ಠಾನ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿಯನ್ನು ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಿ ಆರ್. ಕೆ ಸಿಂಗ್ ಅವರು ಮಾರ್ಚ್ 1 ರಂದು ನವದೆಹಲಿಯಲ್ಲಿ 21 ನೇ ಬಿಇಇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಪ್ರದಾನ ಮಾಡಿದರು.
ಎಂಆರ್ಪಿಎಲ್ ಪರವಾಗಿ ಚಂದರಮಣಿ, ಜಿಜಿಎಂ (ಇಂಪಕ್ಸ್ ಮತ್ತು ಶಿಪ್ಪಿಂಗ್), ಆನಂದ್ ಹಾರಾಡಿ ಅಶೋಕ್, ಸಿಜಿಎಂ (ಟಿಎಸ್) ಮತ್ತು ಸೀನಿಯರ್ ಮ್ಯಾನೇಜರ್ (ಎನ್ಕಾನ್) ಸಿ ಶರಣ್ಯ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ನ್ಯಾಷನಲ್ ಮಿಷನ್ ಫಾರ್ ಎನ್ಹಾನ್ಸ್ಡ್ ಎನರ್ಜಿ ಎಫಿಷಿಯನ್ಸಿ (NMEEE) ಹವಾಮಾನ ಬದಲಾವಣೆಯ ರಾಷ್ಟ್ರೀಯ ಕ್ರಿಯಾ ಯೋಜನೆ (NAPCC) ಅಡಿಯಲ್ಲಿ ಎಂಟು ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಭಾರತ ಸರ್ಕಾರದ ವಿದ್ಯುತ್ ಸಚಿವಾಲಯದ ಅಧೀನದಲ್ಲಿ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ಜಾರಿಗೊಳಿಸಿದ ಈ ಮಿಷನ್ ಅಡಿಯಲ್ಲಿ ಪರ್ಫಾರ್ಮ್, ಅಚೀವ್ ಮತ್ತು ಟ್ರೇಡ್ (ಪಿಎಟಿ) ಪ್ರಮುಖ ಕಾರ್ಯಕ್ರಮವಾಗಿದೆ.
ಭಾರತೀಯ ಸಂಸ್ಕರಣಾಗಾರಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಸಾಧಿಸುವಲ್ಲಿ ಎಂ ಆರ್ ಪಿ ಎಲ್ ತಂಡದ ಪ್ರಯತ್ನ ಮತ್ತು ಇಂಧನ ದಕ್ಷತೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಹೆಚ್ಚಿಸುವ ಕೊಡುಗೆಯಾಗಿದೆ. ಅಲ್ಲದೆ ಕೇಂದ್ರ ಸರ್ಕಾರದ ಇಂಧನ ದಕ್ಷತೆಯ ರಾಷ್ಟ್ರೀಯ ಮಿಷನ್ಗೆ ಎಂಆರ್ಪಿಎಲ್ ಕೊಡುಗೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.