ಮಂಗಳೂರು: ಡಿ.24ರ ಶನಿವಾರದಂದು ಮಂಗಳೂರಿನ ಮಿನಿ ಪುರಭವನದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ದ.ಕ ಮತ್ತು ಉಡುಪಿ ಜಿಲ್ಲೆ ಇದರ ಮಹಾಸಭೆಯು ಚುನಾವಣಾ ವಿಕ್ಷಕರಾಗಿ ಬಂದ ಬದ್ರಿಯಾ ಕಾಲೇಜಿನ ಪ್ರಿನ್ಸಿಪಾಲರಾದ ಯೂಸುಫ್ ರವರ ಮೆಲ್ವೀಚಾರಿಕೆಯಲ್ಲಿ ಜರುಗಿತು.
ಅಧ್ಯಕ್ಷ ಸ್ಥಾನಕ್ಕೆ ಕೆ. ಎಸ್. ಮೊಹಮ್ಮದ್ ಮಸೂದ್ ರೊಬ್ಬರ ನಾಮ ಪತ್ರ ಮಾತ್ರ ಬಂದಿರುವುದರಿಂದ ಅವರನ್ನು ಅವಿರೋಧವಾಗಿ ಮುಂದಿನ ಮೂರು ವರ್ಷಕ್ಕೆ ಅಧ್ಯಕ್ಷರಾಗಿ ಆಯ್ಕೆಮಾಡಲಾಯಿತು.
ಪ್ರಾರಂಭದಲ್ಲಿ ಕುದ್ರೋಳಿ ಜಾಮಿಯಾ ಮಸೀದಿಯ ಖತೀಬರಾದ ಅಬ್ದುಲ್ ಮನ್ನಾನ್ ಮುಪ್ತಿಯವರು ದುವಾ ನಿರ್ವಹಿಸಿದರು. ವಾರ್ಷಿಕ ವರದಿ ಹಾಗೂ ಲೆಕ್ಕ ಪರಿಶೋಧಕರಿಂದ ಪರಿಶೋದಿಸಲ್ಪಟ್ಟ ಬ್ಯಾಲೆಸ್ಸ್ ಶೀಟನ್ನು ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ರವರು ಸಭೆಗೆ ಓದಿ ತಿಳಿಸಿದರು.
ಹೊಸತಾಗಿ ಚುನಾಯಿತರಾದ ಅಧ್ಯಕ್ಷರು ಸಂದರ್ಭೋಚಿತವಾಗಿ ಮಾತನಾಡಿದರು. ಕೊನೆಯಲ್ಲಿ ಉಪಾಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್ ಧನ್ಯವಾದ ಸಮರ್ಪಿಸಿದರು.