ಮಂಗಳೂರು: ಅನೇಕ ವರ್ಷಗಳ ಹಿಂದೆ ಸುತ್ತಮುತ್ತಲಿನ ಪ್ರದೇಶಗಳ ಕೃಷಿ ಭೂಮಿ ಗಳಿಗೆ ನೀರುಣಿಸುತಿದ್ದ ಪಡಿಲು ಬಳಿಯ ಬೈರಾಡಿಕೆರೆ ಅಭಿವೃದ್ಧಿ ಕಾಮಗಾರಿಗೆ ಮತ್ತಷ್ಟು ಬೇಗ ಸಿಗಬೇಕಿದೆ.
ಸುಮಾರು 2.5 ಏಕರೆ ವಿಸ್ತೀರ್ಣವಾದ ಬೈರಾಡಿ ಕೆರೆಗೆ ಅಭಿವೃದ್ಧಿಯನ್ನು ಮೂಡ ವಹಿಸಿಕೊಂಡಿದ್ದು ಮೊದಲನೇ ಹಂತದ ಕಾಮಗಾರಿಗಳು ಪೂರ್ಣಗೊಂಡಿದೆ. ಕಾಮಗಾರಿಗಳಿಗೆ ಮತ್ತಷ್ಟು ಅನುದಾನ ಅಗತ್ಯ ಇದ್ದು ಅದನ್ನು ಹೊಂದಿಸುವ ಕೆಲಸ ನಡೆಯುತ್ತಿದೆ.
ಬೈರಾಡಿ ಕೆರೆಯನ್ನು ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ ಸುಮಾರು ಒಂದು ಪಾಯಿಂಟ್ ಮೂರು ಎಕರೆ ಪ್ರದೇಶ ನೀರಿನ ಜಾಗ ಇದೆ ಇದೀಗ ರೂಪಿಸಿದ ನೂತನ ಯೋಜನೆ ಪ್ರಕಾರ ಉದ್ಯಾನವನ ಇಂಟರ್ಲಾಕ್ , ವಾಕಿಂಗ್ ಟ್ರ್ಯಾಕ್ , ಮಕ್ಕಳ ಆಟದ ಪ್ರದೇಶ , ಕೆರೆಯ ಹೂಳು ತೆಗೆಯುವುದು ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕು ಕಾಮಗಾರಿ ಎರಡು ಬಾರಿ ನಡೆದಿದೆ. ಆದರೂ ಸದ್ಯಕೆರೆ ತುಂಬಾ ನೀರು ಇದ್ದು ಹೂಳಿನಿಂದ ತುಂಬಿಕೊಂಡಿದೆ.
ಕೆರೆಯ ಸುತ್ತ ಆವರಣ ಗೋಡೆ ನಿರ್ಮಿಸಿ ಕಬ್ಬಿಣದ ಗ್ರಿಲ್ಸ್ ಅಳವಡಿಸಲಾಗಿದೆ. ಕೆರೆಯ ಮೆಟ್ಟಿಲುಗಳನ್ನು ಸರಿಪಡಿಸಲಾಗಿದ್ದು, ನೀರಿಗೆ ಇಳಿಯಲು ಸಹಕಾರಿಯಾಗುವಂತೆ ಹೆಚ್ಚುವರಿ ಆಗಿ ಕಡಿಮೆ ಎತ್ತರದ ಮೆಟ್ಟಿಲು ನಿರ್ಮಾಣ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯೆಂದ ನೇರವಾಗಿ ಕೆರೆ ಪ್ರದೇಶಕ್ಕೆ ಸ್ವಾಗತ ನಿರ್ಮಾಣ ಮಾಡಲಾಗಿದೆ. ಕೆರೆ ಪ್ರವೇಶಕ್ಕೆ ರಸ್ತೆ ನಿರ್ಮಾಣವಾಗಿದೆ.