ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಫಾದರ್ ಮುಲ್ಲರ್ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಪುರುಷರ ಮತ್ತು ಮಹಿಳೆಯರ ಬ್ಯಾಡ್ಮಿಂಟನ್ ಟೂರ್ನಮೆಂಟ್ 2022 ಮತ್ತು 2023 ಫಾದರ್ ಮುಲ್ಲರ್ ಇಂಡೋರ್ ಸ್ಟೇಡಿಯಂನಲ್ಲಿ 2ದಿನಗಳ ಕಾಲ ಆಯೋಜನೆ ಮಾಡಲಾಗಿತ್ತು. ಶ್ರೀ ಕೆಮ್ಮಾರ ಬಾಲಕೃಷ್ಣಗೌಡ ಮೆಮರಿ ಟ್ರೋಫಿ ಇದಾಗಿದ್ದು, ಈ ಬ್ಯಾಡ್ಮಿಂಟನ್ ಟೂರ್ನಮೆಂಟ್ ನ ಮೊದಲು ಸರಳ ಸಭಾ ಕಾರ್ಯಕ್ರಮದ ಮೂಲಕ ಉದ್ಘಾಟನೆ ಮಾಡಿದರು.
ಸಭಾಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ರೆವರೆಂಡ್ ಫಾದರ್ ರಿಚರ್ಡ್ ಕುವೆಲ್ಲೋ, ಡಾಕ್ಟರ್ ಕಿಶೋರ್ ಕುಮಾರ್ ರಿಜಿಸ್ಟ್ರಾರ್, ರೆವರೆಂಡ್ ಫಾದರ್ ಅಜಿತ್ ಮಿನೇಜಸ್, ರೆವರೆಂಡ್ ಫಾದರ್ ನೆಲ್ಸನ್, ರೆವರೆಂಡ್ ಫಾದರ್ ಜಾರ್ಜ್ , ಡಾಕ್ಟರ್ ಸಂಜೀವ, ಡಾಕ್ಟರ ಹರಿದಾಸ್, ಸಿಂಥಿಯಾ, ಚಂದ್ರಶೇಖರ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ನೆರದ ಅತಿಥಿಗಳು ಉದ್ಘಾಟಿಸಿದರು. ಬಳಿಕ ಡಾಕ್ಟರ್ ಕಿಶೋರ್ ಕುಮಾರ್ ರಿಜಿಸ್ಟ್ರಾರ್ ಮಾತನಾಡಿ, ಈ ಬ್ಯಾಡ್ಮಿಂಟನ್ ಟೂರ್ನಮೆಂಟ್ ಟೂರ್ನಮೆಂಟಿಗೆ ಶುಭ ಹಾರೈಸಿದರು. ಬಳಿಕ ರೆವರೆಂಡ್ ಫಾದರ್ ರಿಚರ್ಡ್ ಕುವೆಲ್ಲೊ ಮಾತನಾಡಿ. ಸ್ಪರ್ಧಾರ್ಥಿಗಳಿಗೆ ಶುಭ ಹಾರೈಸಿದರು. ಬಳಿಕ ಉದ್ಘಾಟನಾ ಪಂದ್ಯದಲ್ಲಿ ಅತಿಥಿಗಳು ಬ್ಯಾಡ್ಮಿಂಟನ್ ಆಡುವ ಮೂಲಕ ಚಾಲನೆ ನೀಡಿದರು.