ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮಳೆಯಿಂದ ಹಾಳಾಗಿರುವ ರಸ್ತೆಗಳ ದುರಸ್ತಿಗೆ ತಕ್ಷಣ ಗಮನ ಹರಿಸಲಾಗಿದೆ.
24×7 ನೀರು ಪೂರೈಕೆಗಾಗಿ ಪೈಪ್ಲೈನ್ ಅಳವಡಿಕೆ ಮತ್ತು ಗೇಲ್ ಗ್ಯಾಸ್ ಲೈನ್ ಅಳವಡಿಕೆ ಕೂಡ ನಡೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆಗಳ ಮರುನಿರ್ಮಾಣಕ್ಕೆ ಮುಂದಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಮಾರ್ಗಗಳು ಮತ್ತು ಎಂಸಿಸಿ ಮಿತಿಯಲ್ಲಿ ಇತರ ರಸ್ತೆಗಳನ್ನು ನಿರ್ವಹಿಸಲು ಮತ್ತು ದುರಸ್ತಿ ಮಾಡಲು ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನಗಳನ್ನು ರವಾನಿಸಲಾಗಿದೆ.
ನಗರದ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೊಂಚಾಡಿಯ ಆತಿಶ್ ಸಾವಿಗೆ ನ್ಯಾಯ ಕ್ಕಾಗಿ ಅವರ ಸ್ನೇಹಿತ ಗುರುವಾರ ನಗರದ ಮಹಾನಗರ ಪಾಲಿಕೆ ಕಚೇರಿ ಎದುರು ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸಿದ್ದರು.
ಇದರ ಬೆನ್ನಲ್ಲೇ ಪಾಲಿಕೆ ಹೊಂಡ ಗುಂಡಿಗಳ ಸಮಸ್ಯೆ ಇದ್ದರೆ ದೂರು ಸಲ್ಲಿಸಲು ಸಲಹೆ ನೀಡಿದೆ. ಒಂದು ವೇಳೆ ನಾಗರಿಕರು ಗುಂಡಿಗಳು ಅಥವಾ ಅನುಮೋದಿತವಲ್ಲದ ಅಗೆಯುವಿಕೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳನ್ನು ಹೊಂದಿದ್ದರೆ, ಅದನ್ನು ವಾಟ್ಸಾಪ್ ಮೂಲಕ 9449007722 ಗೆ ತಿಳಿಸಬಹುದು ಅಥವಾ ಎಂಸಿಸಿ ಸಹಾಯವಾಣಿ ಸಂಖ್ಯೆ 0824-2220306 ಗೆ ನಮ್ಮನ್ನು ಸಂಪರ್ಕಿಸಬಹುದು.
ನಾಗರಿಕರು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಬೇಕಾಗಿ ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ವಿನಂತಿಸಿದ್ದಾರೆ.