ಮಂಗಳೂರು: ನ್ಯೂಸ್ ಕರ್ನಾಟಕದ ದಶಮಾನೋತ್ಸವದ ಅಂಗವಾಗಿ ಥ್ಯಾಂಕ್ಯೂ ಕರ್ನಾಟಕ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಮೈಲಿಗಲ್ಲನ್ನು ಸಾಧಿಸಲು ಸ್ಪಿಯರ್ ಹೆಡ್ ಮೀಡಿಯಾ ಗ್ರೂಪ್ ಅನ್ನು ಬೆಂಬಲಿಸಿದ ವಿಶ್ವದಾದ್ಯಂತದ ಕನ್ನಡಿಗರಿಗೆ ಸಲ್ಲಿಸಿದೆ.
ಥ್ಯಾಂಕ್ಯೂ ಕರ್ನಾಟಕ ಸರಣಿಯ ಒಂದು ಕಾರ್ಯಕ್ರಮ “ವುಮೆನ್ಯಾ” ಇದು ಪ್ರಭಾವಶಾಲಿ ಮಹಿಳೆಯರು, ಉದ್ಯಮಿಗಳು ಮತ್ತು ಸಾಧಕರನ್ನು ಉತ್ತೇಜಿಸುವ ಸರಣಿ ಕಾರ್ಯಕ್ರಮ. ಇದು ಪ್ರತಿ ಗುರುವಾರ ಪ್ರಸಾರವಾಗುತ್ತದೆ.
ಮಾರ್ಚ್ 23 ರ ಗುರುವಾರ ಪ್ರಸಾರವಾದ 22 ನೇ ಸಂಚಿಕೆಯ ಅತಿಥಿ ಪ್ರೊಪ್ರೈಟ್ರಿಕ್ಸ್ ಬೇಕರ್ಸ್ ಟ್ರೀಟ್ ನ ಮರಿಯಮ್ ಮೊಹಿಯುದ್ದೀನ್ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ನಿರೂಪಕಿ ಅನನ್ಯಾ ಹೆಗ್ಡೆ ನಿರ್ವಹಿಸಿದ್ದರು.
ಈ ಕಾರ್ಯಕ್ರಮವನ್ನು ನ್ಯೂಸ್ ಕರ್ನಾಟಕ.ಕಾಂ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಲಾಯಿತು.
ಮರಿಯಮ್ ಮೊಹಿಯುದ್ದೀನ್ ತನ್ನ ಬಾಲ್ಯವನ್ನು ನೆನಪಿಸಿಕೊಂಡರು, “ನನ್ನ ತಂದೆ ಬೇಕರ್ ಆಗಿದ್ದರು. ಹುಟ್ಟುಹಬ್ಬ ಆಚರಣೆಯ ಸಂದರ್ಭ ವಿಶೇಷ ತಿನಿಸುಗಳನ್ನು ಅವರು ತಯಾರಿಸುತ್ತಿದ್ದರು ಎಂದು ನೆನಪಿಸಿಕೊಂಡರು.
ನಾನು ಬೇಕರ್ ಆಗಲು ನಿರ್ಧರಿಸಲಿಲ್ಲ, ನನ್ನ ಮಕ್ಕಳ ಸ್ನೇಹಿತರು ಮಂಗಳೂರಿನಲ್ಲಿ ಬೇಕ್ ಮಾರಾಟ ಮಾಡುವಂತೆ ನನ್ನನ್ನು ಒತ್ತಾಯಿಸಿದರು. ಅಲ್ಲಿಗೆ ಬಂದ ವಿದ್ಯಾರ್ಥಿಗಳು ಅಂಗಡಿಯನ್ನು ತೆರೆಯಲು ನನ್ನನ್ನು ಪ್ರೋತ್ಸಾಹಿಸಿದರು ಎಂದು ಮರಿಯಮ್ ಮೊಹಿಯುದ್ದೀನ್ ನೆನಪಿಸಿಕೊಂಡರು.
ಗ್ರಾಹಕರ ಅಗತ್ಯಗಳನ್ನು ನಾವು ಮನಗಾಣುವುದು ಪ್ರತಿ ಉದ್ಯಮದ ಯಶಸ್ಸಿನ ಪ್ರಮುಖ ಅಂಶ. ಅಂತೆಯೇ ಆಹಾರ ಉದ್ಯಮದಲ್ಲಿ ಈ ಅಂಶಗಳನ್ನು ಮನಗಾಣಬೇಕು ಎಂದರು.
ಜೀವನದಲ್ಲಿ ಸೋತಾಗ ನಿರಾಶರಾಗದಿರುವುದು ಮತ್ತು ಎತ್ತರದಲ್ಲಿರುವಾಗ ಅಹಂಕಾರ ಪಡದೇ ಇರುವುದು ಕೋವಿಡ್ ಹಂತದಲ್ಲಿ ಕಲಿಸಿದ ಪಾಠವಾಗಿದೆ, ಇದು ವೃತ್ತಿಜೀವನದ ಏರಿಳಿತಗಳನ್ನು ಎದುರಿಸಲು ನನಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಸಮಯ ಹೊಂದಾಣಿಕೆ ನನ್ನ ವೃತ್ತಿಪರ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸಲು ನನಗೆ ಸಹಾಯ ಮಾಡಿತು ಎಂದು ಮರಿಯಮ್ ಮೊಹಿಯುದ್ದೀನ್ ಹೇಳಿದರು ಮತ್ತು ಸಾಮಾಜಿಕ ಅಭಿವೃದ್ಧಿಯ ಕಡೆಗೆ ಮಹಿಳೆಯರ ಆರ್ಥಿಕ ವಿಮೋಚನೆಯ ಕನಸನ್ನು ಹಂಚಿಕೊಂಡರು.
ಪ್ರೇಕ್ಷಕರಿಗೆ ಸಲಹೆ ನೀಡಿದ ಮರಿಯಮ್ ಮೊಹಿಯುದ್ದೀನ್, ” ಜೀವನದಲ್ಲಿ ಯಶಸ್ಸಿಗೆ ಹಲವು ದಾರಿಗಳಿವೆ. ಸತತ ಪ್ರಯತ್ನದಿಂದ ಗುರಿ ತಲುಪುವುದು ಸಾಧ್ಯ ಎಂದು ವಿವರಿಸಿದರು.