ಮಂಗಳೂರು: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡ “ಕೋಟಿ ಕಂಠ ಗಾಯನ” ಯೋಜನೆಯಂತೆ ಮಂಗಳೂರು ಮಹಾನಗರಪಾಲಿಕೆ ಆಶ್ರಯದಲ್ಲಿ, ಆಯುಕ್ತರ ಆದೇಶದಂತೆ ನಗರ ಯೋಜನಾಧಿಕಾರಿ ಶ್ರೀ. ಬಾಲಕೃಷ್ಣ ಗೌಡ ರವರ ನೇತೃತ್ವದಲ್ಲಿ ಪಾಂಡೇಶ್ವರ ಫೋರಂ ಮಾಲ್, ಸಿಟಿ ಸೆಂಟರ್ ಮಾಲ್ ಹಾಗೂ ಭಾರತ್ ಮಾಲ್ ನಲ್ಲಿ ನಾಡ ಗೀತೆಯೊಂದಿಗೆ 6 ಹಾಡುಗಳನ್ನು ಸಾಮೂಹಿಕವಾಗಿ ಆಯಾಯ ಮಾಲ್ ನ ಸಿಬಂಧಿಗಳು ಹಾಡಿದರು.
ದಾಸ್ ಕುಡ್ಲ ಇವೆಂಟ್ಸ್ ನ ಕಲಾವಿದರು ಇವರಿಗೆ ಸಾಥ್ ನೀಡಿ, ಪ್ರೇಕ್ಷಕರ ಮನ ಗೆದ್ದರು. ಮಂಗಳೂರು ಮಹಾನಗರ ಪಾಲಿಕೆ ಸಹಾಯಕ ನಗರ ಯೋಜನಾಧಿಕಾರಿ ಶ್ರೀ. ದಿಲೀಪ್ ರವರು ಉಪಸ್ಥಿತರಿದ್ದರು