ಮಂಗಳೂರು: ದೇಶದ ಅಗ್ರಗಣ್ಯ ಬ್ಯಾಂಕುಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕ್ ತನ್ನ ಶತಮಾನೋತ್ಸವ ಸಂಭ್ರಮವನ್ನು ಗ್ರಾಹಕರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ಗೃಹ ಸಾಲವನ್ನು ಏಪ್ರಿಲ್ ೧೭ ರಿಂದ ಜುಲೈ ೧೭ರವರೆಗೆ ವಿಶೇಷ ಅಭಿಯಾನ- ಹಮ್ಮಿಕೊಂಡಿದ್ದು, ‘ಕೆಬಿಎಲ್ ಸೆಂಟಿನರಿ ಮಹೋತ್ಸವ’ದ ಮೂಲಕ ಮಂಜೂರು ಮಾಡಲಿದೆ. ದೇಶದಾದ್ಯಂತ ವ್ಯಾಪಿಸಿರುವ ಬ್ಯಾಂಕಿನ ಎಲ್ಲಾ 109 ಶಾಖೆಗಳಲ್ಲಿ ಈ ವಿಶೇಷ ಅಭಿಯಾನದ ಕೊಡುಗೆಗಳನ್ನು ಗ್ರಾಹಕರು ಪಡೆಯಬಹುದಾಗಿದೆ.
ಕರ್ಣಾಟಕ ಬ್ಯಾಂಕ್ ಗೃಹ ಸಾಲಗಳಿಗಾಗಿ ಡಿಜಿಟಲ್ ಲೋನ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ, ಗ್ರಾಹಕರು ತಾವು ಇದ್ದ ಸ್ಥಳದಲ್ಲಿಯೇ, ಅವರ ಅನುಕೂಲಕರ ಸಮಯದಲ್ಲಿಯೇ ಈ ಸಾಲ ಸೌಲಭ್ಯಗಳನ್ನು ಡಿಜಿಟಲ್ ವೇದಿಕೆಗಳ ಮೂಲಕ ಪಡೆಯಬಹುದಾಗಿದೆ. ಈ ಸಾಲಗಳಿಗೆ ತ್ವರಿತ ತಾತ್ವಿಕ ಮಂಜೂರಾತಿ ಲಭ್ಯವಾಗಲಿದ್ದು ಇದು ಗ್ರಾಹಕರ ಸಂತಸವನ್ನು ಹೆಚ್ಚಿಸಲಿದೆ. ಈ ಅವಧಿಯಲ್ಲಿ ಗೃಹ ಸಾಲಗಳು ಶೇ. ೮.೭೫ ರಿಂದ ಆರಂಭವಾಗುವ ಆಕರ್ಷಕ ಬಡ್ಡಿದರಗಳಲ್ಲಿ ಲಭ್ಯವಾಗಲಿದೆ. ಈ ಅಭಿಯಾನದಲ್ಲಿ ಗೃಹಸಾಲಗಳು ಸಂಸ್ಕರಣಾ ಶುಲ್ಕ ರಹಿತವಾಗಿ ಗ್ರಾಹಕರಿಗೆ ಸಿಗಲಿದೆ. ಅದಲ್ಲದೆ ಇತರ ಶುಲ್ಕಗಳಲ್ಲಿಯೂ ವಿಶೇಷ ವಿನಾಯಿತಿ ನೀಡಲಾಗಿದೆ ಹಾಗೂ ಇನ್ನೂ ಅನೇಕ ಇತರ ಸೌಲಭ್ಯಗಳನ್ನು ಒದಗಿಸಲಾಗಿದೆ.
ಈ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಬ್ಯಾಂಕಿನ ಇಂಟರೀಮ್ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಶೇಖರ್ ರಾವ್ , “ಬ್ಯಾಂಕಿನ ಶತಮಾನೋತ್ಸವ ವರ್ಷದಲ್ಲಿ ಈ ಅಭಿಯಾನದ ಮುಖಾಂತರ ವಿಶೇಷ ಗೃಹಸಾಲ ಸೌಲಭ್ಯಗಳನ್ನು ಗ್ರಾಹಕರಿಗೆ ಪರಿಚಯಿಸಲು ಸಂತೋಷವೆನಿಸುತ್ತದೆ. ಅತ್ಯಂತ ಸುಲಭವಾಗಿ ಡಿಜಿಟಲ್ ಪ್ರಕ್ರಿಯೆಗಳ ಮೂಲಕವೂ ಸಾಲಗಳಿಗೆ ಕ್ಷಿಪ್ರ ಮಂಜೂರಾತಿ ಆಕರ್ಷಕ ಬಡ್ಡಿದರದಲ್ಲಿ ದೊರೆಯಲಿದ್ದು, ತನ್ಮೂಲಕ ಸ್ವಂತ ಮನೆ ಹೊಂದುವ ಕನಸುಗಳು ನನಸಾಗಲಿದೆ. ‘ನಿಮ್ಮ ಕುಟುಂಬದ ಬ್ಯಾಂಕ್ ದೇಶದಾದ್ಯಂತ’ ಎಂಬ ಧ್ಯೇಯ ವಾಕ್ಯಕ್ಕೆ ಅನುಗುಣವಾಗಿ ಬ್ಯಾಂಕ್ ಗ್ರಾಹಕರ ಅವಶ್ಯಕತೆಗಳನ್ನು ಪೂರೈಸಲಿದೆ” ಎಂದು ನುಡಿದು