News Karnataka Kannada
Friday, May 03 2024
ಮಂಗಳೂರು

ಮಂಗಳೂರು: ಚುನಾವಣಾ ಆಯೋಗದ ಜೊತೆ ಕೈ ಜೋಡಿಸಲು ಐವನ್ ಡಿ’ಸೋಜ ಕರೆ

Mangaluru: Ivan D'Souza calls for joining hands with Election Commission
Photo Credit :

ಮಂಗಳೂರು: ಮತದಾರರ ಗುರುತು ಚೀಟಿಗೆ ಆಧಾರ್ ಲಿಂಕ್ ಮಾಡುವ, ಹೊಸ ಮತದಾರರ ಸೇರ್ಪಡೆ ಮಾಡುವ ಮತ್ತು ಲಿಂಕ್ ಮಾಡುವ ಆಯಪ್ ಮೂಲಕ ಲಿಂಕ್ ಮಾಡುವ ಬಗ್ಗೆ ಮಾಹಿತಿ ಶಿಬಿರದ ಕಾರ್ಯಕ್ರಮವನ್ನು ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಉಪಮೇಯರ್ ಅಬ್ದುಲ್ ಸಲೀಂ ಇವರು ಉದ್ಘಾಟಿಸಿ ಮಾತಾನಾಡಿದವರು. ಆಧಾರ್ ಕಾರ್ಡ್ ಲಿಂಕ್ ಮಾಡುವುದು ಚುನಾವಣಾ ಆಯೋಗದ ನಿರ್ದೇಶನವಾಗಿದ್ದು, ಆಧಾರ್ ಅಥವಾ ಇತರ ಯಾವುದೇ ದಾಖಲೆಗಳಿಗೆ ಲಿಂಕ್ ಮಾಡುವ ಮೂಲಕ 2-3 ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಪತ್ತೆ ಹಚ್ಚುವುದು ಮಾತ್ರವಲ್ಲದೇ, ಪ್ರತಿಯೊಬ್ಬರು ಒಂದೇ ಕಡೆ ಮತ ಚಲಾಯಿಸಲು ಅರ್ಹನಾಗಿದ್ದು, ಮತದಾರರ ಆಧಾರ್ ಕಾರ್ಡಿಗೆ ಲಿಂಕ್ ಮಾಡುವ ಮೂಲಕ ಮತದಾನದಲ್ಲಿ ಆಗುವ ಅಕ್ರಮ ತಡೆಗಟ್ಟಲು ಸಾಧ್ಯ ಎಂದು ಸಲೀಂ ರವರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಮಾತನಾಡಿದ ಕಾರ್ಯಕ್ರಮದ ಸಂಘಟಕರಾದ  ಐವನ್ ಡಿ ಸೋಜರವರು, ಸುಮಾರು 350 ಕ್ಕೂ ಅಧಿಕ ಮಂದಿ ಆಧಾರ್ ಕಾರ್ಡ್ ಲಿಂಕ್ ಮಾಡುವ ಮೂಲಕ ಶಿಬಿರವು ಯಶಸ್ವಿಯಾಗಿದ್ದು, ಈ ಶಿಬಿರದಲ್ಲಿ ಭಾಗವಹಿಸಿ, ಉಳಿದವರಿಗೂ ಇದರ ಬಗ್ಗೆ ತಿಳುವಳಿಕೆ ನೀಡುವುದು ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಎಲ್ಲ ವಾರ್ಡ್ ಮಟ್ಟಗಳಲ್ಲಿ ಶಿಬಿರವನ್ನು ಏರ್ಪಾಡು ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಚುನಾವಣಾ ಆಯೋಗದ ವಿಭಾಗದಿಂದ ಶೈಲಜ ನೊಂದಾವಣೆ ಬಗ್ಗೆ ಮಾಹಿತಿ ನೀಡಿದರು.

ಸಮಾರಂಭದಲ್ಲಿ ಸ್ಥಳೀಯ ಮಾಜಿ ಮೇಯರ್ ಕಾರ್ಪರೇಟರ್ ಜೆಸಿಂತಾ ವಿಜಯ, ಮಾಜಿ ಕಾರ್ಪರೇಟರ್ ಭಾಸ್ಕರ್ ರಾವ್, ನಮಿತಾ ಡಿ .ರಾವ್, ರತಿಕಲಾ, ಶೈಲಜ, ವಿಜಯಲಕ್ಷ್ಮಿ, ರಾಕೇಶ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಕಲಾ ಜೋಗಿ, ಕಾಂಗ್ರೆಸ್ ಪಕ್ಷದ ನಾಯಕರುಗಳಾದ ಪ್ರಭಾಕರ್ ಶ್ರೀಯಾನ್ , ಹೊನ್ನಯ್ಯ, ನವಾಜ್ ಜೆಪ್ಪು, ರಮಾನಂದ ಪೂಜಾರಿ, ಸವಾನ್ ಜೆಪ್ಪು, ಸಲೀಂ ಮುಕ್ಕ, ಪಿಯುಸ್ ಮೊಂತೆರೊ, ಅಶಿತ್ ಪಿರೇರಾ, ಸತೀಶ್ ಪೆಂಗಲ್, ಮೀನಾ ಶೆಟ್ಟಿ, ಜೇಮ್ಸ್ ಪ್ರವೀಣ್, ಸತೀಶ್ ಪೆಂಗಲ್, ಆನಂದ್ ಸೋನ್ಸ್, ಅನಿಲ್ ತೋರಸ್, ಮಹೇಶ್ ಕೋಡಿಕಲ್, ಅಬಿಬುಲ್ಲ, ಆಲಿಸ್ಟನ್ ಡಿ ಕುನ್ಹಾ, ಬಾಜಿಲ್ ರೋಡ್ರಿಗಸ್, ಕೀರ್ತಿ ಪೂಜಾರಿ, ದೀಕ್ಷಿತ್ ಅತ್ತಾವರ, ಮಾರ್ಸೆಲ್ ಮೊಂತೆರೊ, ವಿಕ್ಟೋರಿಯಾ, ಮೊಂತುಲೋಬೊ, ಎನ್.ಪಿ.ಮನುರಾಜ್, ಟಿ.ಕೆ. ಸುಧೀರ್, ನಜೀರ್ ಬಜಾಲ್, ನೀರ್ಜಾಪಾಲ್, ಹುಸೈನ್ ಬೋಳಾರ್, ಹೈದರ್ ಬೋಳಾರ್, ದಿನೇಶ್ ರಾವ್, ಸದಾಶಿವ ಕುಲಾಲ್, ಅರ್ಮಾನ್ ಲೋಬೊ ಮುಂತಾದವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಆಶ್ರಮಗಳಿಗೆ ತೆರಳಿ, ಅಲ್ಲಿರುವ ನಿವಾಸಿಗಳ ಆಧಾರ್ ಲಿಂಕ್ ಮಾಡುವ ಕಾರ್ಯಕ್ರಮವು ನಡೆಯಿತು. ಸುಮಾರು 10 ಮಂದಿ ಕಾರ್ಯಕರ್ತರು , ಇಬ್ಬರು ಚುನಾವಣಾ ಆಯೋಗದ ಸದ್ಯಸರು ಸೇರಿ ಲಿಂಕ್ ಮಾಡುವ ಕಾರ್ಯಕ್ರಮದಲ್ಲಿ ಭಾಗಿಯಾದರು. ಕಾರ್ಯಕ್ರಮವು ಬೆಳಿಗ್ಗೆ 10ರಿಂದ ಸಂಜೆ 4.30ಗಂಟೆಯವರೆಗೆ ಈ ಕಾರ್ಯಕ್ರಮ ಜರುಗಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು