ಮಂಗಳೂರು: ನಗರದ ಕರಾವಳಿ ಸರ್ಕಲ್ ಪಾರ್ಕಿಗೆ ಕಾರ್ಮಿಕರ ಮತ್ತು ರಿಕ್ಷಾ ಚಾಲಕರ ಉಪಯೋಗಕ್ಕೆ 75ನೇ ವರ್ಷದ ಸ್ವಾತ್ರಂತ್ರ್ಯ ಮಹೋತ್ಸವದ ಸಂದರ್ಭದಲ್ಲಿ ಸುದ್ಧ ಕುಡಿಯುವ ನೀರಿನ ವ್ಯವಸ್ಥೆಯ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ದ.ಕ ಕಾಮಿಕ ಪರಿಷತ್ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾದ ಶ್ರೀ ಐವನ್ ಡಿ ಸೋಜರವರು ದೇಶದಲ್ಲಿ ಅಸಂಘಟಿತ ಕಾರ್ಮಿಕರ ಕೊಡುಗೆ ದೇಶದ ಸ್ವಾತಂತ್ರ್ಯದ ಉಳಿವಿಗಾಗಿ ಮಹತ್ತರ ವಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಹಿರಿಯ ರಿಕ್ಷಾ ಚಾಲಕರಾದ ಮೊಂತುಲೋಬೊ ಇವರನ್ನು ಸನ್ಮಾನಿಸಲಾಯಿತು. ಧ್ವಜರೋಹಣ ನೆರವೇರಿಸುವ ಮೂಲಕ 75 ನೇ ಸ್ವಾತ್ರಂತ್ಯ ಅಮೃತ ಮಹೋತ್ಸವವನ್ನು ವಿಭೄಂಜಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಕಾರ್ಪೋರೇಟರ್ ಭಾಸ್ಕರ್ ರಾವ್, ಯುವ ಕಾಂಗ್ರೆಸ್ ಕಾರ್ಯದರ್ಶಿ ದೀಕ್ಷಿತ್ ಅತ್ತಾವರ, ಕೆಪಿಸಿಸಿ ಅಲ್ಪಸಂಖ್ಯಾತ ಕಾರ್ಯದರ್ಶಿ ರೋಹಿತಾಕ್ಷ, ಪದಾಧಿಕಾರಿಗಳಾದ ಮನೋಜ್, ಅಶೋಕ, ಆನಂದ್, ಪ್ರಸಾದ್, ಗಣೇಶ್, ವಿಲ್ ಸ್ಪ್ರೆಡ್ ಫೆರ್ನಾಂಡಿಸಿ, ಹರೀಶ್ ಮತ್ತು ಇತರರು ಉಪಸ್ಥಿತರಿದ್ದು, ಸಂಭ್ರಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ರಿಕ್ಷಾ ಚಾಲಕರಾದ ಮೊಂತು ಲೋಬೊ, ವಲೇರಿಯನ್ ಮಿನೇಜಸ್, ವಿವೇಕ್ ರಾಜ್ ಪೂಜಾರಿ, ಹಾಗೂ ಇತರ ರಿಕ್ಷಾ ಚಾಲಕರುಗಳು ಉಪಸ್ಥಿತರಿದ್ದರು.