ಮಂಗಳೂರು: ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಿ ಸಮಸ್ಯೆಗಳಿದ್ದಲ್ಲಿ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ತೆಗೆದು ಉತ್ತಮ ಜೀವನ ನಡೆಸುವುದು ಬಹಳ ಮುಖ್ಯ ಎಂದು ಆರಕ್ಷಕ ಠಾಣೆ ಉರ್ವ ಮಂಗಳೂರು ಇಲ್ಲಿನ ಇನ್ಸ್ಪೆಕ್ಟರ್ ಶ್ರೀಮತಿ ಭಾರತಿ ತಿಳಿಸಿದರು.
ಅವರು ಆರಕ್ಷಕ ಠಾಣೆ ಉರ್ವ ಮಂಗಳೂರು, ಸನ್ಮತಿ ಚಾರಿಟೇಬಲ್ ಟ್ರಸ್ಟ್, ಮನ ಶಾಂತಿ ಕೌನ್ಸಲಿಂಗ್ ಸಂಶೋಧನಾ ತರಬೇತಿ ಕೇಂದ್ರ ಮಂಗಳೂರು, ಬಾಬು ಜಗಜೀವನ್ ರಾಮ್ ಸೇವಾ ಸಂಘ ಇವರ ನೇತೃತ್ವದಲ್ಲಿ ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317 ಡಿ, ಲಯನ್ಸ್ ಕ್ಲಬ್ ಮಂಗಳೂರು, ಲಿಯೋ ಕ್ಲಬ್ ಮಂಗಳೂರು ಹಾಗೂ ಎ ಜೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ 30.10 2022 ರಂದು ಅಂಗನವಾಡಿ ಕೇಂದ್ರ ಬಾಬುಜಿನಗರ, ಕೋಡಿಕಲ್ ಇಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಮತ್ತು ದಂತ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಶಿಬಿರದಲ್ಲಿ ಸಾಮಾನ್ಯ ಆರೋಗ್ಯ, ಮಕ್ಕಳ ಆರೋಗ್ಯ, ಗಂಟಲು ಕಿವಿ ಮತ್ತು ಮೂಗು ಹಾಗೂ ದಂತ ಚಿಕಿತ್ಸೆ ವಿಭಾಗಗಳಿಂದ ತಪಾಸಣೆ ನಡೆಯಿತು.
ಅಲ್ಲದೆ ಆಸ್ಪತ್ರೆ ವತಿಯಿಂದ ಉಚಿತ ಮಧುಮೇಹ ಮತ್ತು ಇಸಿಜಿ ಪರೀಕ್ಷೆ ಗಳನ್ನು ನಡೆಸಲಾಯಿತು. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಶಕ್ತಿನಗರದ ವತಿಯಿಂದ ಅಗತ್ಯ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು. ಸರಕಾರದ ಎ ಬಿ ಎಚ್ ಎ ಕಾರ್ಡ್ ನೋಂದಾವಣೆಯನ್ನು ಕೂಡ ಮಾಡಲಾಯಿತು.
ವೇದಿಕೆಯಲ್ಲಿ ಆರಕ್ಷಕ ಠಾಣೆ ಉರ್ವ ಇಲ್ಲಿನ ಎ ಎಸ್ ಐ ಹರೀಶ್ ಹೆಚ್, ಸ್ಥಳೀಯ ಕಾರ್ಪೊರೇಟರ್ ಮನೋಜ್ ಕುಮಾರ್, ಮನಶಾಂತಿ ಕೇಂದ್ರದ ಡಾಕ್ಟರ್ ರಮೀಳಾ ಶೇಖರ್, ಲಯನ್ಸ್ ಇಂಟರ್ನ್ಯಾಷನಲ್ 317 ಡಿ ಜಿಲ್ಲೆಯ ಅಧ್ಯಕ್ಷ ಶೇಖರ್ ಪೂಜಾರಿ, ಬಾಬು ಜಗಜೀವನ್ ರಾಮ್ ಸೇವಾ ಸಂಘದ ರಾಮಚಂದ್ರ, ಶಿವಾನಂದ್, ಪ್ರಸನ್, ಲಯನ್ಸ್ ಕ ಕ್ಲಬ್ ಮಂಗಳೂರು ಅಧ್ಯಕ್ಷ ಗುರು ಪ್ರೀತ್ ಆಳ್ವ, ಕಾರ್ಯದರ್ಶಿ ಇಂದಿರಾ ಶೆಟ್ಟಿ, ಖಜಾಂಜಿ ಅರುಣ್ ಪಿಂಟೋ, ಬಾಬೂಜಿನಗರ ಅಂಗನವಾಡಿ ಕೇಂದ್ರದ ಶಿಕ್ಷಕಿ ಇಂದಿರಾ, ಸನ್ಮತಿ ಚಾರಿಟೇಬಲ್ ಟ್ರಸ್ಟ್ನ ಕುಶಾಲ, ಈಶ್ವರ್ ಪೂಜಾರಿ ಮತ್ತು ಪದಾಧಿಕಾರಿಗಳು ಉಪಸ್ತರಿದ್ದರು
ಎಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ವೈದ್ಯಕೀಯ ಸಾಮಾಜಿಕ ಕಾರ್ಯಕರ್ತರಾದ ನವೀನ್ ಕುಮಾರ್ ಎಂ ಮತ್ತು ಪ್ರವೀಣ್ ಕುಮಾರ್ ಪಿ ಶಿಬಿರದ ಬಗ್ಗೆ ಮತ್ತು ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಾರ್ವಜನಿಕರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.