ಮಂಗಳೂರು: ನಮ್ಮೆಲ್ಲರನ್ನು ಒಂದುಗೂಡಿಸಿದ್ದು ಮನುಷ್ಯತ್ವ ಹೊರತು ಬೇರೆ ಯಾವುದೂ ಅಲ್ಲ, ಸಮಾಜದಲ್ಲಿ ಎಲ್ಲರನ್ನೂ ಜತೆ ಸೇರಿಸಿಕೊಂಡು ಹೋಗಬೇಕು. ನಮ್ಮ ಕುಟುಂಬದ ಜತೆ ಸಮಾಜವು ಉದ್ದಾರವಾಗಬೇಕು ಎಂದು ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ಆಗಿರುವ ಮೆಲ್ವಿನ್ ಪಿಂಟೋ ಯಸ್.ಜೆ ಹೇಳಿದರು.
ಅವರು ನಗರದ ಶಕ್ತಿನಗರದ ” ಸಾನಿಧ್ಯ” ಭಿನ್ನ ಸಾಮಾರ್ಥ್ಯ ದ ಮಕ್ಕಳ ವಸತಿಯುತ ಶಾಲೆ ಮತ್ತು ತರಭೇತಿ ಸಂಸ್ಥೆಯಲ್ಲಿ ಶುಕ್ರವಾರ ಹೈಡ್ರೋ ಈಜುಕೊಳದ ಉದ್ಘಾಟನೆ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ವಿಶೇಷ ಮಕ್ಕಳಿಂದ ನಾವು ಪ್ರೀತಿಯ ಬಗ್ಗೆ ಕಲಿಯಬೇಕು ಯಾಕೆಂದರೆ ಅ ಮಕ್ಕಳಲ್ಲಿ ಸ್ವಾರ್ಥ ಇಲ್ಲ,ಪ್ರೀತಿ ಮಾತ್ರ ಇದೆ ಎಂದರು.
ಸಾನಿಧ್ಯದ ಮಕ್ಕಳಿಂದ ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಈ ಸಂದರ್ಭ ಈಜುಕೊಳ ನಿರ್ಮಾಣಕ್ಕೆ ನೆರವು ನೀಡಿದ ಹೆರಿಕ್ ಜಾನ್ ಬಿ ಡಿಸೋಜ ಹಾಗೂ ಸಂತೋಷ್ ಶೆಟ್ಟಿ ಮತ್ತು ಗ್ಲೆನ್ ಡಿಸೋಜರವರನ್ನು ಸನ್ಮಾನಿಸಲಾಯಿತು.
ಶ್ರೀ ಗಣೇಶ ಸೇವಾ ಟ್ರಸ್ಟಿನ ಅಧ್ಯಕ್ಷ ಮಹಾಬಲ ಮಾರ್ಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡೈಜಿವರ್ಲ್ಡ್ ವಾಹಿನ ನಿರ್ದೇಶಕ ಹೇಮಾಚಾರ್ಯ, ರಾಷ್ಟ್ರೀಯ ಈಜುಪಟು ಬೇಂಗ್ರೆ ಆನಂದ್ ಅಮೀನ್ ಉಪಸ್ಥಿತರಿದ್ದರು.
ಈ ಸಂದರ್ಭ ಸಂಸ್ಥೆಯ ಖಜಾಂಜಿ ಜಗದೀಶ್ ಶೆಟ್ಟಿ, ನಿರ್ದೇಶಕರಾದ ಸ್ಟೀಫನ್ ಪಿಂಟೋ, ಮಹಮ್ಮದ್ ಬಶೀರ್, ನಂದಕುಮಾರ್, ದಿವ್ಯಾ ಬಾಳಿಗ, ಜ್ಯೋತಿಕಾ ಆಳ್ವ, ಮಹಮ್ಮದ್ ಬಶೀರ್ ಉಪಸ್ಥಿತರಿದ್ದರು.
ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಸಂತ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಶ್ರೀ ಗಣೇಶ ಸೇವಾ ಟ್ರಸ್ಟಿನ ಜತೆ ಕಾರ್ಯದರ್ಶಿ ರಾಧಾಕೃಷ್ಣ ಕೆ ವಂದಿಸಿದರು.