ಮಂಗಳೂರು: ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವುಗೊಳಿಸುವಂತೆ ಮತ್ತು ತಕ್ಷಣ ಟೋಲ್ ಸಂಗ್ರಹ ನಿಲ್ಲಿಸುವಂತೆ ಪ್ರತಿಭಟಿಸಿದ ಟೋಲ್ ವಿರೋಧಿ ಹೋರಾಟ ಸಮಿತಿ ಹಾಗೂ ಅದಕ್ಕೆ ಪಕ್ಷಾತೀತವಾಗಿ ಬೆಂಬಲ ಸೂಚಿಸಿದ ಸಂಘ ಸಂಸ್ಥೆಗಳ ಹಾಗೂ ಸ್ಥಳೀಯ ನಾಗರಿಕರ ಮೇಲೆ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಅಧಿಕಾರ ದುರುಪಯೋಗಪಡಿಸಿ ಹೋರಾಟಗಾರರ ಮೇಲೆ ಪೊಲೀಸರಿಂದ ದಬ್ಬಾಳಿಕೆ ಮಾಡಿರುವುದನ್ನು ಅಖಿಲ ಭಾರತ ಹಿಂದೂ ಮಹಾ ಸಭಾ ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ರಾಜೇಶ್ ಪವಿತ್ರನ್ ಅವರು ತೀವ್ರವಾಗಿ ಖಂಡಿಸಿದರು.
ಅಕ್ರಮ ಟೋಲ್ ಗೇಟ್ ನಲ್ಲಿ ದಬ್ಬಾಳಿಕೆಯಿಂದ ಸುಂಕ ವಸೂಲಿ ಮಾಡುವವರ ವಿರುದ್ಧ ಹೋರಾಟವನ್ನು ಮಾಡಿ ಹಗಲು ದರೋಡೆ ಮಾಡುವುದನ್ನು ತಡೆಯಲು ಯತ್ನಿಸಿದಾಗ , ಸಾರ್ವಜನಿಕರಿಗೆ ಪೊಲೀಸರ ಮುಖಾಂತರ ದಬ್ಬಾಳಿಕೆ ನಡೆಸಿದ ಬಿಜೆಪಿ ಸರಕಾರದ ನಡೆ ನಾಚಿಕೆಗೇಡಿನ ಆಗಿದ್ದು ಇದು ಸ್ಪಷ್ಟವಾಗಿ ಲೂಟಿಕೋರರ ಕಂಪೆನಿಯ ಜೊತೆ ಸರ್ಕಾರ ಶಾಮೀಲಾಗಿರುವುದನ್ನು ಎತ್ತಿತೋರಿಸುತ್ತದೆ .ಇವರಿಗೆ ತಕ್ಕ ಉತ್ತರವನ್ನು ಸುರತ್ಕಲ್ ಕ್ಷೇತ್ರದ ಜನರು ಬರುವಂತೆ ಚುನಾವಣೆಯಲ್ಲಿ ಬಿಜೆಪಿಗೆ ಕೊಡಲಿದ್ದಾರೆಂದು ಎಂದು ರಾಜೇಶ್ ಪವಿತ್ರನ್ ತಿಳಿಸಿದರು.