ಮಂಗಳೂರು: ಬಂಟ್ವಾಳ ತಾಲೂಕಿನ ಆಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತಿಮ್ಮುಕೋಡಿಯ ಲೀನಾ ಕ್ರಾಸ್ತ ಇವರ ಮನೆ ಬಾರಿ ಮಳೆಯಿಂದ ಸಂಪೂರ್ಣ ಕುಸಿದು ಜಾಖಂ ಗೊಂಡಿದ್ದು ಹಾಗೂ ಲೋರೆಟೊವಿನ ದಿವಂಗತ ಎಫ್ರೇಮ್ ಸಿಕ್ವೇರಾ ಇವರ ಮನೆಯ ಕಂಪೌಂಡ್ ಕುಸಿದು ಮನೆಗೆ ಹಾನಿಗೊಂಡಿದೆ.
ಈ ಸ್ಥಳಕ್ಕೆ ಮಾಜಿ ಸಚಿವರಾದ ರಮಾನಾಥ ರೈ ಯವರು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಪಿಯೂಸ್ ಎಲ್ ರೊಡ್ರಿಗಸ್, ಪುರಸಭಾ ಸದಸ್ಯರಾದ ವಾಸು ಪೂಜಾರಿ ಲೋರೆಟೊ,ರಿಚಾರ್ಡ್ ಮೆನೇಜಸ್, ರೋಕೇಶ್ ಡಿಸೋಜ, ಕಿರಣ್ ಪಿಂಟೋ ಮೊದಲಾದವರು ಉಪಸ್ಥಿತರಿದ್ದರು.