News Karnataka Kannada
Tuesday, April 30 2024
ಮಂಗಳೂರು

ಮಂಗಳೂರು: ಅಯೋಧ್ಯೆ ಆಂದೋಲನದ ನೆನಪಿನಲ್ಲಿ ಗೀತಾ ಜಯಂತಿ

Mangaluru: Gita Jayanti to commemorate Ayodhya movement
Photo Credit : News Kannada

ಮಂಗಳೂರು: ಅಯೋಧ್ಯೆಯಲ್ಲಿ ಆಂದೋಲನದ ನೆನಪಿನಲ್ಲಿ ಗೀತಾ ಜಯಂತಿ ಆಚರಣೆ ಅಂಗವಾಗಿ ವಿಶ್ವಹಿಂದು ಪರಿಷತ್ ಬಜರಂಗದಳ ವತಿಯಿಂದ ಜ.29ರಂದು ಉಳ್ಳಾಲದಲ್ಲಿ ಶೌರ್ಯ ಯಾತ್ರೆ ಕಾರ್ಯಕ್ರಮ ನಡೆಯಲಿದೆ ಎಂದು ವಿಶ್ವಹಿಂದು ಪರಿಷತ್ ಮಂಗಳೂರು ಜಿಲ್ಲಾ ಕಾರ್ಯದರ್ಶಿ ವಿಶ್ವಹಿಂದು ಪರಿಷತ್ ಮುಖಂಡರ ಶಿವಾನಂದ ಮಂಡನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಮಧ್ಯಾಹ್ನ 3 ಗಂಟೆಗೆ ಉಳ್ಳಾಲಬೈಲ್ನಿಂದ ಶೌರ್ಯ ಯಾತ್ರೆ ಪ್ರಾರಂಭಗೊಂಡು ಕೃಷ್ಣನಗರ, ಒಳಪೇಟೆ, ಓವರ್ ಬ್ರಿಡ್ಜ್ತೊಕ್ಕೊಟ್ಟು ಜಂಕ್ಷನ್, ಕಾಪಿಕಾಡ್, ಓವರ್ಬ್ರಿಡ್ಜ್ ಮಾರ್ಗವಾಗಿ ದೊಡ್ಡ ಮನೆತನದ ಗದ್ದೆ(ಶ್ರೀ ವೈದ್ಯನಾಥ ಚಾವಡಿ ಉಳ್ಳಾಲಬೈಲ್)ಗೆ ಆಗಮಿಸಿ, ಸಂಜೆ 5 ಗಂಟೆಗೆ ಬೃಹತ್ಸಾರ್ವಜನಿಕ ಸಭೆ ನಡೆಯಲಿದೆ.

ಎರಡುಸಾವಿರ ಮಂದಿ ಬಜರಂಗದಳ ಸಮವಸಧಾರಿಸ್ವಯಂಸೇವಕರು ಶೌರ್ಯ ಯಾತ್ರೆಯಲ್ಲಿಸಭೆಯಲ್ಲಿ ಬಜರಂಗದಳ ರಾಷ್ಟ್ರೀಯ ಸಂಯೋಜಕನೀರಜ್ ದೊನೇರಿಯಾದಿಕೂಚಿ ಭಾಷಣ ಮಾಡುವರು. ನಿಕ್ಕೋಡಿ ಜ್ಞಾನರತ್ನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಭಾಸ್ಕರ ದೇವಸ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ವಿಶ್ವಹಿಂದು ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಪ್ರಾಂಶ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್, ಪ್ರಾಂತ ಸಹಸೇವಾ ಪ್ರಮುಖ ಗೋಪಾಲ್ ಕುತ್ತಾರ್, ಬಜರಂಗದಳ ಓಂಕಾರ ಧ್ವಜಧಾರಿಗಳಾಗಿ ಪಾಲ್ಗೊಳ್ಳುವರು ವಿಭಾಗ ಸಂಯೋಜಕ ಭುಜಂಗ ಕುಲಾಲ್ ಭಾಗವಹಿಸಲಿದ್ದಾರೆ ಎಂದರು.

ಉಳ್ಳಾಲ ಉಗ್ರಗಾಮಿಗಳ ತಾಣ ಆಗುತ್ತಿದ್ದು, ಹಿಂದು ಸಮಾಜದಲ್ಲಿ ಧೈರ್ಯ ತುಂಬಲು, ಸಮಾಜವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಉಳ್ಳಾಲದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮಇದಾಗಿದ್ದು, ಮುಂದಿನ ವರ್ಷದಿಂದ ಪ್ರತಿ ತಾಲೂಕು ಕೇಂದ್ರಗಳಲ್ಲಿ ಈ ಕಾರ್ಯಕ್ರಮ ಡಿಸೆಂಬರ್‌ನಲ್ಲೇ ನಡೆಯಲಿದೆ.

ಬಜರಂಗದಳ ವಿಶ್ವಹಿಂದು ಪರಿಷತ್ದ ಯುವ ವಿಭಾಗವಾಗಿದ್ದು, ಕಳೆದ 39 ವರ್ಷಗಳಿಂದ ದೇಶಾದ್ಯಂತ ಲಕ್ಷಾಂತರ ಯುವಶಕ್ತಿಯನ್ನು ಕಾರ್ಯಗಳಲ್ಲಿ ದೇಶಭಕ್ತರನ್ನಾಗಿ ಪರಿವರ್ತಿಸುವ ಕೆಲಸ\ ಮಾಡುತ್ತಾ ಬಂದಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು