ಮಂಗಳೂರು: ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘ ಮಂಗಳೂರು, ಸಾನ್ನಿಧ್ಯ ಸಮೂಹ ಸಂಸ್ಥೆಗಳು ಶಕ್ತಿನಗರ ಮಂಗಳೂರು ಇವರ ಸಹಯೋಗದೊಂದಿಗೆ ಮಂಗಳೂರಿನ 4ವಿಶೇಷ ಶಾಲೆಗಳ ಭಿನ್ನಸಾಮರ್ಥ್ಯ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಬಸ್ಸು ಪಾಸುಗಳ ವಿತರಣೆ ಕಾರ್ಯಕ್ರಮ ಸಾನ್ನಿಧ್ಯ ಶಾಲೆಯಲ್ಲಿ ನಡೆಯಿತು .ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ರಾಜೇಂದ್ರ ಕುಮಾರ್ ,ಜಯಶೀಲ ಅಡ್ಯಂತಾಯ , ಮಹಾಬಲ ಮಾರ್ಲ , ಜಗದೀಶ್ ಶೆಟ್ಟಿ , ರಾಜ್ ಕುಮಾರ್ , ವಸಂತ ಕುಮಾರ್ ಶೆಟ್ಟಿ, ಗಣೇಶ್ ಶೆಟ್ಟಿ ,ಸತ್ಯರಾಜ್ ಶೆಟ್ಟಿ ಅತಿಥಿಗಳಾಗಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನ ನೆರೆದ ಅತಿಥಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು .ಬಳಿಕ ಜಯಶೀಲ ಅಡ್ಯಂತಾಯ ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘ ಅಧ್ಯಕ್ಷರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಬಳಿಕ ನೆರೆದ ಅತಿಥಿಗಳು ಉಚಿತ ಪ್ರಯಾಣದ ಬಸ್ಸು ಪಾಸುಗಳ ಸಾಂಕೇತಿಕ ವಿಚಾರಣೆ ನಡೆಸಿದರು. ಬಸ್ಸು ಪಾಸು ವಿತರಣೆ ಬಳಿಕ ಜಿಲ್ಲಾಧಿಕಾರಿ ಡಾ .ರಾಜೇಂದ್ರ ಕೆ ವಿ ಸಭೆಯನ್ನುದ್ದೇಶಿಸಿ ಮಾತನಾಡಿದರು .ಬಳಿಕ ಸಂಸ್ಥೆಯ ವತಿಯಿಂದ ರಾಜೇಂದ್ರ ಕೆ ವಿ ಅವರನ್ನು ಅಭಿನಂದಿಸಲಾಯಿತು ಅಲ್ಲದೆ ಇದೇ ಸಂದರ್ಭದಲ್ಲಿ ಜಯಶೀಲ ಅಡ್ಯಂತಾಯ ಅಧ್ಯಕ್ಷರು ತಕ್ಷಣ ಬಸ್ಸು ಮಾಲಕರ ಸಂಘ ಇವರನ್ನು ಅಭಿನಂದಿಸಲಾಯಿತು.