ಮಂಗಳೂರು: ಕತೋಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ರಚನಾ ಸಂಸ್ಥೆಯ ವತಿಯಿಂದ ಸಮುದಾಯದ ವಿವಿಧ ಕ್ರೈಸ್ತರ ಐವರು ಸಾಧಕ ಶ್ರೇಷ್ಠರಿಗೆ ಪ್ರತಿಷ್ಠಿತ ರಚನಾ ಪ್ರಶಸ್ತಿ ಪ್ರಧಾನಿಸಲಾಯಿತು.
ಮಂಗಳೂರಿನ ಮಿಲಾಗ್ರಿಸ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು . ಅಧ್ಯಕ್ಷತೆ ವಹಿಸಿದ್ದ ಬಿಷಪ್ ಡಾಕ್ಟರ್ ಪೀಟರ್ ಪೌಲ್ ಸಲ್ದಾನ ಮಾತನಾಡಿ ಮಾನವೀಯ ಪರಿಸರ ಉದ್ಯಮ ಮೊದಲದ ಕ್ಷೇತ್ರಗಳಲ್ಲಿ ಸಾಧನೆಗೆ ಇದು ಸಾವಿರಾರು ಜನರ ಸೇವೆ ಮಾಡುವ ಮೂಲಕ ಸಾಧಕರು ಸಮುದಾಯದ ಗೌರವನ್ನು ಹೆಚ್ಚಿಸಿದ್ದಾರೆ ಈ ಸಾಧಕರಿಂದ ಇನ್ನಷ್ಟು ಸೇವೆ ಸಮಾಜಕ್ಕೆ ಲಭ್ಯವಾಗಲಿ ಎಂದು ಶುಭ ಹಾರೈಸಿದರು.
ಹೆಚ್ ಎಫ್ ಡಿ ಸಿ ಬ್ಯಾಂಕಿನ ಹಿರಿಯ ಕಾರ್ಯಕಾರಿ ಉಪಾಧ್ಯಕ್ಷ ಸಂಜಯ್ ಡಿಸೋಜಾ ಮಾತನಾಡಿ ಈ ಹಿಂದಿನ ವರ್ಷಗಳಲ್ಲಿ ಹಾಗೂ ಈ ದಿನ ರಚನಾ ಪ್ರಶಸ್ತಿ ಸ್ವೀಕರಿಸುವ ಸಾಧಕರನ್ನು ಗಮನಿಸಿದಾಗ ಸಮಾಜದ ಮೇಲಿರುವ ಅವರ ಕಾಳಜಿ , ದಾನ , ಹಾಗು ಸೇವೆಗಾಗಿ ತೀವ್ರ ತುಡಿತ , ಜೀವನದಲ್ಲಿ ಅವರು ಅಳವಡಿಸಿಕೊಂಡಿರುವ ಶಿಸ್ತು ಅವರನ್ನು ಪ್ರಶಸ್ತಿಗೆ ಅರ್ಹರಾಗಿಸಿರುದನ್ನ ಕಂಡುಬರುತ್ತದೆ ಎಂದರು.
ಉದ್ಯಮಿಗಳು ಸಮಾಜದಲ್ಲಿ ಬದಲಾವಣೆ ಮಾಡಬಲ್ಲ ಸಾಮರ್ಥ್ಯ ಉಳ್ಳವರಾಗಿದ್ದಾರೆ ದೇಶದ ಜಿಡಿಪಿ ರಫ್ತು ಮಾತ್ರವಲ್ಲದೆ ಉದ್ಯಮ ಸೃಷ್ಟಿಯಲ್ಲಿ ಉದ್ಯಮಿಗಳ ಪಾತ್ರ ಮಹತ್ವದ ಮಹತ್ವವಾಗಿದೆ .ಆದರೆ ಬಹುತೇಕ ಉದ್ಯಮಿಗಳು ಸಂಘಟಿತ ಹಣಕಾಸು ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ ಬ್ಯಾಂಕ್ಗಳಿಂದ ಹಣಕಾಸಿನ ನೆರವಿಲ್ಲದೆ ಉದ್ಯಮಿಗಳು ಮುಂದೆ ಬರಲು ಸಾಧ್ಯವಿಲ್ಲ . ಹಿಂದೆಲ್ಲ ಬ್ಯಾಂಕ್ ಹಣಕಾಸಿನ ಸೌಲಭ್ಯ ಪಡೆಯುವುದು ಕಷ್ಟವಾಗಿದ್ದರು ಇಂದು ಡಿಜಿಟಲ್ ವ್ಯವಸ್ಥೆ ಅದನ್ನು ಸುಗಮಗೊಳಿಸಿದೆ. ಸಣ್ಣ ಉದ್ಯಮಿಗಳಿಗೆ ಬ್ಯಾಂಕ್ ಹಣಕಾಸಿನ ಸೌಲಭ್ಯದ ಬಗ್ಗೆ ರಚನಾ ಮೂಲಕ ತರಬೇತಿ ನೀಡುವ ಕೆಲಸ ಆಗಲಿ ಎಂದವರು ಹೇಳಿದರು .
ಅಂದ ಹಾಗೆ ರಚನಾ ಕೃಷಿಕ ಪ್ರಶಸ್ತಿ ಬಂಟ್ವಾಳದ ಲಿಯೋಫಾರ್ಮೆಂಡಿಸ್ , ರಚನಾ ಉದ್ಯಮಿ ಪ್ರಶಸ್ತಿ ಉಡುಪಿಯ ಜೇರಿ ವಿನ್ಸನ್ಟ್ ಡಯಾಸ್ , ರಚನಾ ವೃತ್ತಿಪರ ಪ್ರಶಸ್ತಿ ಬೆಲ್ಮನ್ ನ ಸಿಸ್ಟರ್ ಡಾಕ್ಟರ್ ಗ್ಲಾಡೀಸ್ ಮಿನಿಜಸ್ , ರಚನಾ ಅನಿವಾಸಿ ಉದ್ಯಮಿ ಪ್ರಶಸ್ತಿ ಪುತ್ತೂರಿನ ಮೈಕಲ್ ಡಿಸೋಜಾ ಮತ್ತು ರಚನಾ ಮಹಿಳಾ ಸಾಧಕಿ ಪ್ರಶಸ್ತಿಯನ್ನು ಪುಲಶೇಖರ ನಿವಾಸಿ ಡಾಕ್ಟರ್ ಲವೀನಾ ನೊರೊನ್ಹಾ ಅವರಿಗೆ ಪ್ರಧಾನ ಮಾಡಲಾಯಿತು.