News Karnataka Kannada
Sunday, April 28 2024
ಮಂಗಳೂರು

ಮಂಗಳೂರು: ಬಾವುಟದ ಗೌರವ ಕಾಪಾಡುವಂತೆ ಹರ್ ಘರ್ ತಿರಂಗಾ ಕಾರ್ಯಕ್ರಮಗಳು ನಡೆಯಬೇಕು

Mangaluru: Har Ghar Tiranga programmes should be held to maintain the dignity of the flag
Photo Credit : News Kannada

ಮಂಗಳೂರು: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬುಧವಾರ ಆಗಸ್ಟ್ 10ರಂದು, ಪಾಂಡೇಶ್ವರದ ನೆಹರೂ ಪ್ರತಿಮೆಯಿಂದ ಗಡಿಯಾರ ಗೋಪುರ, ಪಿವಿಎಸ್ ನಲ್ಲಿರುವ ಗಾಂಧೀಜಿ ಪ್ರತಿಮೆವರೆಗೆ ಪಕ್ಷಾತೀತವಾಗಿ ಸ್ವಾತಂತ್ರ್ಯ ನಡಿಗೆ ಹಮ್ಮಿಕೊಳ್ಳುವುದಾಗಿ ಮಾಜಿ ಶಾಸಕ ಜೆ. ಆರ್. ಲೋಬೋ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಹರೂ ಮತ್ತು ಗಾಂಧೀಜಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಅವರ ಸ್ವಾತಂತ್ರ್ಯ ಹೋರಾಟ, ಅವರೊಂದಿಗೆ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ನೆನಪಿಸಿ ಈ ನಡಿಗೆ ಹಮ್ಮಿಕೊಳ್ಳಲಾಗಿದೆ. ನೆಹರುರವರು ಒಂಬತ್ತು ಬಾರಿ ಜೈಲಿಗೆ ಹೋಗಿದ್ದರು. ಶಾಸ್ತ್ರಿ, ಪಟೇಲ್, ಜಗಜೀವನರಾಂ, ಮನಮೋಹನ್ ಸಿಂಗ್ ಎಲ್ಲರ ಹೋರಾಟವನ್ನೂ ಸ್ಮರಿಸಲಾಗುವುದು ಎಂದರು.

ಹರ್ ಘರ್ ತಿರಂಗಾ ಯೋಜನೆ ಸಂತೋಷ. ಆದರೆ ಬಾವುಟದ ಗೌರವ ಕಾಪಾಡುವಂತೆ ಈ ಕಾರ್ಯಕ್ರಮಗಳು ನಡೆಯಬೇಕು. ರಾಷ್ಟ್ರ ಧ್ವಜಕ್ಕೆ ಯಾವ ರೀತಿಯ ಅವಮಾನವೂ ಆಗಬಾರದು. ಬಾವುಟದ ಅಳತೆ, ಬಣ್ಣ ಎಲ್ಲದಕ್ಕೂ ಅರ್ಥ, ಗೌರವ ಇದೆ. ಕಾಂಗ್ರೆಸ್ ಅದನ್ನು ಕಾಪಾಡಿದೆ. ಈಗಿನ ಸರಕಾರವೂ ಸಹಕರಿಸಬೇಕು ಎಂದೂ ಲೋಬೋ ಹೇಳಿದರು.

ಈ ಸರಕಾರವು ನಿರಂಕುಶದತ್ತ ಸಾಗಿದೆ. ಆದರೆ ರಾಷ್ಟ್ರ ಭಕ್ತಿಯಲ್ಲಾದರೂ ಸಾಚಾ ಆಗಿ ನಡೆದುಕೊಳ್ಳಲಿ ಎಂದು ತಿರುಗೇಟು ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು