ಮಂಗಳೂರು : ಕುದ್ರೋಳಿಯಲ್ಲಿ ನಡೆದ ಗ್ಯಾಂಗ್ ವಾರ್ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ 3ತಲ್ವಾರು 3ದ್ವಿಚಕ್ರ ವಾಹನ ಮತ್ತು ಆಟೋ ರಿಕ್ಷಾವನ್ನು ವಶಪಡಿಸಿದ್ದಾರೆ.
ನವನೀತ ಅಶೋಕನಗರ, ಹೇಮಂತ್ ಹೊಯ್ಗೆಬೈಲ್, ದೀಕ್ಷಿತ್ ಬೋಳೂರು ಮತ್ತು ತಲೆಮರೆಸಿಕೊಳ್ಳಲು ನೆರವು ನೀಡಿದ್ದ. ಸಂದೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 1ವರ್ಷದ ಹಿಂದೆ ಅಳಕೆ ಗ್ಯಾಂಗಿನ ಇಂದ್ರಜಿತ್ ಎಂಬಾತನ ಕೊಲೆ ನಡೆದಿತ್ತು. ಬೋಳೂರು ಗ್ಯಾಂಗಿನ ಉಲ್ಲಾಸ್ ಕಾಂಚನ್ ಗೌತಮ್ ರಾಕೇಶರನ್ನು ಕೌಶಿಕ್ ಆಶಿಕ್ ಮೋಕ್ಷಿತ್ ತಲ್ವಾರ್ ಜಗ್ಗ ನಿತಿನ್ ಪೂಜಾರಿ ಮತ್ತು ದೇವದಾಸ್ ಪೂಜಾರಿ ಎಂಬವರು ಸೇರಿ ಹಳೆ ದ್ವೇಷದಲ್ಲಿ ಇಂದ್ರಜಿತ್ ಕೊಲೆ ಮಾಡಿದ್ದರು.
ಪ್ರಕರಣದ ಆರೋಪಿಗಳು ಸದ್ಯ ಜೈಲಿನಲ್ಲಿದ್ದಾರೆ .ಇಂದ್ರಜಿತ್ ಕೊಲೆಗೆ ಪ್ರತೀಕಾರ ತೀರಿಸಲು ಅಳಕೆ ಗ್ಯಾಂಗಿನ ನವನೀತ್ ಹೇಮಂತ್ ಮತ್ತು ದೀಕ್ಷಿತ್ ಸೇರಿ ಸಂಚು ನಡೆಸಿದ್ದು ಪ್ರಸ್ತುತ ಜೈಲಿನಲ್ಲಿರುವ ಕೌಶಿಕ್ ಮತ್ತು ಆಶಿಕ್ ಅವರ ಸೋದರನಾದ ಅಂಕಿತ್ ನನ್ನು ಕೊಲೆಗೈಯ್ಯಲು ಪ್ಲಾನ್ ಹಾಕಿದ್ದರು. ಅದರಂತೆ ಕುದ್ರೋಳಿಯಲ್ಲಿ ನವಂಬರ ಇಪ್ಪತ್ತೇಳು ರಾತ್ರಿ ಅಂಕಿತ್ ಮೇಲೆ ಹಂತಕರ ತಂಡ ತಲವಾರು ಬೀಸಿದ್ದು ಆತ ತಪ್ಪಿಸಿಕೊಂಡಿದ್ದ.
ಈ ವೇಳೆ ಹಲ್ಲೆಯನ್ನು ತಡೆಯಲು ಬಂದಿದ್ದ ಶ್ರವಣ್ ಎಂಬಾತನ ಎಡಕುತ್ತಿಗೆಯ ಮೇಲೆ ಬಲವಾದ ತಳವಾರ ಏಟು ಬಿದ್ದಿದ್ದು ತೀವ್ರ ಗಾಯಗೊಂಡಿದ್ದಾನೆ. ಇಂದ್ರಜಿತ್ ಕೊಲೆಯಲ್ಲಿ ಆರೋಪಿಗಳು ಜೈಲಿನಲ್ಲಿದ್ದರೂ ಅವರ ಹತ್ತಿರದ ಸಂಬಂಧಿಕರನ್ನು ಟಾರ್ಗೆಟ್ ಮಾಡಿದ ಗ್ಯಾಂಗ್ ಇದೀಗ ಮತ್ತೊಬ್ಬನ ಕೊಲೆಗಾಗಿ ತಲವಾರು ದಾಳಿ ನಡೆಸಿವೆ.