News Karnataka Kannada
Sunday, May 05 2024
ಬೀದರ್

ಔರಾದ: ಪ್ರಭು ಚವ್ಹಾಣರನ್ನು ಸೋಲಿಸಲು ಒಗ್ಗಟ್ಟಿನಿಂದ ಕೆಲಸ ಮಾಡಿ- ಸಿದ್ದರಾಮಯ್ಯ

Work unitedly to defeat Prabhu Chavan: Siddaramaiah
Photo Credit : News Kannada

ಔರಾದ: ಬಿಜೆಪಿಯನ್ನು ಕಿತ್ತೆಸೆಯಬೇಕಾದರೆ, ಪ್ರಭು ಚವ್ಹಾಣ ರನ್ನು ಔರಾದ ಕ್ಷೇತ್ರದಿಂದ ತೆಗೆಯಬೇಕಾದರೆ ಕಾಂಗ್ರೆಸ್ ಕಾರ್ಯಕರ್ತರು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಔರಾದ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರುಗಡೆ ಇರುವ ಆವರಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಔರದ ಕ್ಷೇತ್ರದಿಂದ ಒಟ್ಟು 27 ಅಭ್ಯರ್ಥಿಗಳು ಎಮ್ಎಲ್ಎ ಆಕಾಂಕ್ಷಿ ಗಾಗಿ ಅರ್ಜಿ ಹಾಕಿದ್ದೀರಿ. ಇದರಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ಸಿಗುತ್ತದೆ. ಉಳಿದ 26 ಜನಕ್ಕೆ ಟಿಕೆಟ್ ಸಿಗುವುದಿಲ್ಲ, ಪ್ರಭು ಚವ್ಹಾಣ ಸೋಲಿಸ ಬೇಕಾದರೆ ಉಳಿದ 26 ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಕೆಲಸ ಮಾಡಿತ್ತಿರೋ ಇಲ್ಲವೋ ಎಂದು ಅಭ್ಯರ್ಥಿಗಳಿಗೆ ಪ್ರಶ್ನೆ ಮಾಡಿದರು ಇದಕ್ಕೆ ಎಲ್ಲರೂ ಒಮ್ಮತದಿಂದ ಕೆಲಸ ಮಾಡುತ್ತೇವೆ ಎಂದು ಸಂಕಲ್ಪ ಮಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪರವಾದಂತಹ ಅಲೆ ಎದ್ದಿದೆ. ಅಲ್ಲದೇ ಜನತೆಯು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಡಲು ಸಜ್ಜಾಗಿದ್ದಾರೆ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಔರಾದ್ ಕ್ಷೇತ್ರದಲ್ಲಿ ಸಚಿವ ಪ್ರಭು ಚವ್ಹಾಣ ಏನ್ ಕೆಲಸ ಮಾಡಿದ್ದಾರೆ? ಔರಾದ್ ಕ್ಷೇತ್ರದ ಎಲ್ಲಾ ಕಡೆಯಲ್ಲೂ ರಸ್ತೆ ಹಾಳಾಗಿ ಹೋಗಿದೆ ಎಂಬುದಾಗಿ ವಾಗ್ಧಾಳಿ ನಡೆಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಅಭಿವೃದ್ದಿಯ ವಿಚಾರವಾಗಿ ನಾವು ಚರ್ಚಿಸೋದಕ್ಕೆ ಸಿದ್ಧ ಎಂದು ಹೇಳಿದರೂ ಬರುತ್ತಿಲ್ಲ. ಬಿಜೆಪಿಯಲ್ಲಿ ಸುಳ್ಳು ಹೇಳುವ ಗಿರಾಕಿಗಳೇ ಜಾಸ್ತಿ ಇದ್ದಾರೆ ಎಂದು ಕಿಡಿಕಾರಿದರು. ಮೋದಿ ಪ್ರಧಾನಿ ಆದ ಮೇಲೆ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಬಿಜೆಪಿ ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿಯ ಆಡಳಿತವೇ ಇಲ್ಲ. ಎಲ್ಲಿ ನೋಡಿದರೂ ಕಮೀಷನ್ ದಂಧೆಯೇ ಹೆಚ್ಚು ಎಂಬುದಾಗಿ ಗುಡುಗಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು