News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಕಮಿಷನ್ ಆರೋಪ ಸಾಬೀತು ಪಡಿಸದಿದ್ದಲ್ಲಿ ಮೋದಿನ್ ವಿರುದ್ಧ ಮಾನನಷ್ಟ ಮೊಕದ್ದಮೆ

Defamation case filed against Modin if commission fails to prove charges
Photo Credit : News Kannada

ಮಂಗಳೂರು:  ಸುರತ್ಕಲ್ ಮಾರುಕಟ್ಟೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಮಾಜಿ ಶಾಸಕ ಮೋದಿನ್ ಬಾವ ಅವರು ನನ್ನ ವಿರುದ್ಧ 38 ಕೋಟಿ ಕಮಿಷನ್ ಪಡೆದುಕೊಂಡಿರುವ ಆರೋಪ ಮಾಡಿದ್ದಾರೆ ಈ ಬಗ್ಗೆ ಅಧಿಕೃತ ದಾಖಲೆಗಳು ಇದ್ದಲ್ಲಿ ಬಹಿರಂಗಪಡಿಸಲಿ ಇಲ್ಲವಾದರೆ ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿರುವ ಭಾವ ವಿರುದ್ಧ 3 ಕೋಟಿ ರೂಪಾಯಿ ಮಾನವನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಉತ್ತರ ಕ್ಷೇತ್ರ ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.

ಸುರತ್ಕಲ್ ಬಳಿ ಮಾಧ್ಯಮ ಮಿತ್ರರ ಜೊತೆ ಮಾತಾಡಿದ ಶಾಶಕರು ಮಂಗಳೂರು ಉತ್ತರ ಕ್ಷೇತ್ರದ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಈಗಾಗಲೇ ಕ್ಷೇತ್ರದ ವಿವಿಧ ಎಡೆಯಲ್ಲಿ ರಸ್ತೆ , ತಡೆಗೋಡೆ , ಪಾರ್ಕ್ ಇನ್ನಿತರ ಕಾಮಗಾರಿಗೆ ಚಾಲನೆ ನೀಡಲಾಗಿದೆ ಸುರತ್ಕಲ್ ಮಾರುಕಟ್ಟೆ ಅರ್ಧಕ್ಕೆ ನಿಲ್ಲಲು ಮಾಜಿ ಶಾಸಕ ಭಾವ ಕಾರಣ.

ಸ್ಥಳವನ್ನು ಗುತ್ತಿಗೆ ವಹಿಸಿಕೊಂಡಿರುವವರಿಗೆ ಸಂಪೂರ್ಣ ಬಿಟ್ಟುಕೊಡದ ಕಾರಣ ಅವರಿಗೆ ಅರ್ಧದಲ್ಲಿ ಪೇಮೆಂಟ್ ಮಾಡಲಾಗಿದೆ ಈಗ ಹೆಚ್ಚುವರಿ ಅನುದಾನ ಸರಕಾರ ನೀಡಿದ್ದು ಕಾಮಗಾರಿ ಮತ್ತೆ ಪ್ರಾರಂಭಗೊಳ್ಳಲಿದೆ ನಿರಾಧಾರ ಆರೋಪ ಮಾಡುವ ಭಾವ ಅವರಿಗೆ ಲಾಯರ್ ನೋಟೀಸ್ ಕೊಡಲಾಗುವುದು ಮಾತ್ರವಲ್ಲದೆ ಮಾನವನಷ್ಟ ಮುಖದಮೆ ಮಾಡಲಾಗುವುದು ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹೇಳಿದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು