ಮಂಗಳೂರು: 39ನೇ ಫಲ್ನೀರ್ ವಾರ್ಡ್ ಕಾಂಗ್ರೆಸ್ ಸಭೆಯು ಇಂದು ಏ.26ರಂದು ನಡೆಯಿತು. ಮಾಜಿ ಎಂಎಲ್ ಸಿ ಐವನ್ ಡಿಸೋಜಾ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಖಂಡಿತವಾಗಿ ಕಾಂಗ್ರೆಸ್ ಸರಕಾರ ಬರಲಿದೆ. ಈಗಿನ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ತುಂಬಿ ಹೋಗಿದೆ. ಸಾಮಾನ್ಯ ಜನರು ಇವರ ಆಡಳಿತದಿಂದ ರೋಸಿ ಹೋಗಿದ್ದಾರೆ. ಚುನಾವಣೆಯಲ್ಲಿ ಜನರು ಬಿಜೆಪಿ ಯವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಮಾಜಿ ಶಾಸಕ, ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ಮಾತನಾಡಿ, ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ನಿರೀಕ್ಷಿಸುವಂತಿಲ್ಲ. ಮಂಗಳೂರಿನಲ್ಲಿ ಬಂಡವಾಳ ಹೂಡಿಕೆ ಮಾಡಲು ತರಲು ಬಿಜೆಪಿ ಸರಕಾರ ತಯಾರಿಲ್ಲ. ಉನ್ನತ ಶಿಕ್ಷಣ ಕಲಿತ ವಿದ್ಯಾರ್ಥಿಗಳಿಗೆ ಕೆಲಸ ಇಲ್ಲ. ಕೆಲಸಕ್ಕೆ ವಿದೇಶಕ್ಕೆ ವಿದ್ಯಾರ್ಥಿಗಳು ಹೋಗುತ್ತಾರೆ. ಮನೆಯಲ್ಲಿ ತಂದೆ ತಾಯಂದಿರು ಕಷ್ಟದಲ್ಲಿ ಇದ್ದಾರೆ. ಇದನ್ನು ನಿಭಾಯಿಸಲು ಒಳ್ಳೆಯ ಸ್ಥಿರ ಸರಕಾರ ಬೇಕು. ಅದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಆದ್ದರಿಂದ ಕಾಂಗ್ರೆಸ್ ಸರಕಾರ ಬರಲು ನಾವೆಲ್ಲರೂ ಬಹಳಷ್ಟು ಶ್ರಮಿಸಬೇಕು ಎಂದರು.
ಸಭೆಯಲ್ಲಿ ಡಾ.ಕವಿತಾ ಡಿಸೋಜಾ, ವಾರ್ಡ್ ಅಧ್ಯಕ್ಷ ಐವನ್ ಡಿಸೋಜಾ,ಅಪ್ಪಿ, ರಮಾನಂದ ಪೂಜಾರಿ, ಆಶೀತ್ ಪಿರೇರಾ,ಟಿ.ಕೆ. ಸುಧೀರ್, ಸುಹೆಲ್ ಕಂದಕ್, ಎಸ್. ಕೆ. ಸವಾನ್, ಶೈಲಾ ನೀತಾ ಡಿಸೋಜಾ, ಅನಿಲ್ ಲೋಬೊ, ಓಸ್ವಲ್ಡ್ ಫುರ್ಟಾಡೊ, ಮೊದಲಾದವರು ಉಪಸ್ಥಿತರಿದ್ದರು.