ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಮಹೋತ್ಸವ ಸೆಪ್ಟೆಂಬರ್ 26ಅಕ್ಟೋಬರ್ 6ರ ವರೆಗೆ ನಡೆಯಲಿದ್ದು ಭಕ್ತರ ಅಭಿಲಾಷೆಯಂತೆ ಈ ಬಾರಿ ಮಂಗಳೂರು ದಸರಾ ಮಹೋತ್ಸವ ಮತ್ತಷ್ಟು ವೈಭವ ಪೂರ್ವವಾಗಿ ನಡೆಯಲಿದೆ ,ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗುವುದು ಎಂದು ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ ಜನಾರ್ದನ ಪೂಜಾರಿ ಹೇಳಿದರು.
ದಸರಾ ಮಹೋತ್ಸವ ಅಂಗವಾಗಿ ಭಾನುವಾರ ಶ್ರೀ ಕ್ಷೇತ್ರದಲ್ಲಿ ಭಾನುವಾರ ಪೂರ್ವಭಾವಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಆಮಂತ್ರಣ ಪತ್ರಿಕೆಯನ್ನು ಮುಖ್ಯಮಂತ್ರಿಗಳೇ ಕಳಿಸಿಕೊಟ್ಟು ದಸರಾಕ್ಕೆ ಬರುವಂತೆ ನಾನೇ ಆಹ್ವಾನಿಸುತ್ತೇನೆ ಮುಖ್ಯಮಂತ್ರಿ ಸಮಯವನ್ನು ಗೊತ್ತುಪಡಿಸಿ ದಸರಾ ಉದ್ಘಾಟನೆ ದಿನ ಸಮಯ ನಿಗದಿಪಡಿಸಲಾಗುವುದು .ಮಂಗಳೂರು ದಸರಾ ಮಹೋತ್ಸವಕ್ಕೆ ಪ್ರಧಾನಿ ಮೋದಿ ಅವರು ಬಂದರೂ ಖುಷಿ ಪಡುತ್ತೇವೆ ಎಂದರು.
ವರ್ಷದಿಂದ ವರ್ಷಕ್ಕೆ ವೇಷಭೂಷಣ ಸ್ತಬ್ಧಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಮೆರವಣಿಗೆಯು ವಿಳಂಬವಾಗುತ್ತಿದೆ ಇದರಿಂದ ಭಕ್ತರಿಗೆ ಗಣಪತಿ ನವದುರ್ಗೆಯರ ಸಹಿತ ಶಾರದಾ ವೈಭವ್ ವಾದ ಶೋಭಾಯಾತ್ರೆ ನೋಡಲು ಸಾಧ್ಯವಾಗುತ್ತಿಲ್ಲ, ಇದಕ್ಕಾಗಿ ಈ ಹಿಂದೆ ನಿರ್ಧರಿಸಿದಂತೆ ಹಸಿರು ಕೊಡೆಗಳು ಜಾನಪದ ಕಲಾತಂಡಗಳು ಬಳಿಕ ನಾರಾಯಣ ಗುರು ಗಣಪತಿ ನವದುರ್ಗೆಯರ ಸಹಿತ ಶಾರದಾ ಟ್ಯಾಬ್ಲೊಗಳು ತೆರಳಲಿವೆ ಇದಾದ ಬಳಿಕ ವೇಷಭೂಷಣಗಳ ಸ್ತಬ್ಧ ಚಿತ್ರಗಳು ಸಾಗಿ ಬರಲಿವೆ. ಭಕ್ತರ ಅಭಿಪ್ರಾಯದಂತೆ ಕ್ಷೇತ್ರದ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ತಿಳಿಸಿದ್ದಾರೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಮಹೋತ್ಸವದ ಶಾರದೆಯ ಈ ಬಾರಿ 12 ಲಕ್ಷ ವೆಚ್ಚದಲ್ಲಿ 12 ಕೆಜಿ ತೂಕದ ರಜತ ಪೀಠ ನಿರ್ಮಿಸಲಾಗುತ್ತಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಸೇವಾದಳ ಹಾಗೂ ಭಕ್ತಾದಿಗಳಿಂದ ಈ ರಜತ ಪೀಠ ನಿರ್ಮಿಸಲಾಗುತ್ತಿದ್ದು ಪುತ್ತೂರಿನಲ್ಲಿ ನಿರ್ಮಿಸಲಾಗುತ್ತಿದೆ 24ರಂದು ರಜತ ಪೀಠ ಸಮರ್ಪಣೆ ಕಾರ್ಯ ನಡೆಯಲಿದೆ ಭಕ್ತರೊಬ್ಬರ ಬೆಳ್ಳಿಯ ವೀಣೆಯನ್ನು ಕೊಡುಗೆಯಾಗಿ ನೀಡಲಿದ್ದಾರೆ ಎಂದು ತಿಳಿಸಿದರು.