ಮಂಗಳೂರು: ಚರಂಡಿ ಅತ್ತ ಗಮನಹರಿಸದೆ ಲವ್ ಜಿಯಾದ್ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಿ ಎಂದು ಇತ್ತೀಚಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು ಅವರು ನೀಡಿದ್ದ ಹೇಳಿಕೆ ಬಗ್ಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಭರತ್ ಶೆಟ್ಟಿ ಸಮರ್ಥನೆ ಮಾಡಿಕೊಂಡಿದ್ದಾರೆ .
ಸುದ್ದಿಗಾರರ ಜೊತೆ ಮಾತನಾಡಿದ ಅವರು ನಳಿನ್ ಅವರು ಎಲ್ಲಿಯೂ ಕೂಡ ರಸ್ತೆ ವಿಚಾರ ಬಿಟ್ಟುಬಿಡಿ ಎಂದು ಹೇಳಿಲ್ಲ ರಸ್ತೆ ಚರಂಡಿ ಅಭಿವೃದ್ಧಿ ಕೆಲಸ ಮಾಡಿಸುವುದು ಚುನಾಯಿತ ಪ್ರತಿನಿಧಿಗಳು , ಅದರೊಂದಿಗೆ ಕಾರ್ಯಕರ್ತರು ಸಮಾಜದ ಸ್ವಾಸ್ತ್ಯ ಕೆಡದಂತ್ತೆ ಕೆಲಸ ಮಾಡಿ ಎಂದು ಹೇಳಿದ್ದಾರೆ .ಸಾಮಾಜಿಕ ಪಿಡುಗುಗಳ ಬಗ್ಗೆಯೂ ಕಾರ್ಯಕರ್ತರು ಗಮನ ಹರಿಸಿಕೊಂಡು ಕೆಲಸ ಮಾಡಿರಿ ಎಂದು ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು
ಇನ್ನು ಸಿದ್ದರಾಮಯ್ಯನವರು ಹಿರಿಯ ನಾಯಕರು ಅವರು ಜವಾಬ್ದಾರಿಯುತವಾಗಿ ಮಾತನಾಡಬೇಕು ಯಾರನ್ನು ಕೂಡ ನಿಂದಿಸುವಾಗ ಅವರ ಎಚ್ಚರ ವಹಿಸಬೇಕು ಎಂದು ಭರತ್ ತಿರುಗೇಟು ನೀಡಿದರು . ಮುಖ್ಯಮಂತ್ರಿ ಬೊಮ್ಮಾಯಿಗೆ ಸಿದ್ದರಾಮಯ್ಯ ಅವರು ನಾಯಿಮರಿಗೆ ಹೋಲಿಸಿದ ವಿಚಾರಕ್ಕೆ ಸಂಬಂಧಿಸಿ, ನಾಯಿ ಕತ್ತೆ ಹೆಸರನ್ನು ಕರೆಯುವುದು ಒಳ್ಳೆಯ ಟೇಸ್ಟ್ ಅಲ್ಲ ನಾಯಿ ಅತ್ಯಂತ ನಂಬಿಕೆಯ ಹೆಸರಾಗಿರುವ ನಾಯಿ , ಆದರೆ ಅವರು ನಾಯಿಗೆ ಹೋಲಿಸಿದರೆ ಅದು ಒಳ್ಳೆಯ ವಿಷಯ ಕೆಟ್ಟದಾಗಿ ಯೋಚಿಸಿದರೆ ಅದು ಕೆಟ್ಟ ವಿಚಾರ ಅವರು ಕೂಡ ನಾಯಿ ಆದ್ರೆ ಒಳ್ಳೆಯದು ನಾಯಿಯಂತೆ ತನ್ನ ಪಕ್ಷಕ್ಕೆ ಪ್ರಾಮಾಣಿಕವಾಗಿ ಇದ್ದರೆ ಒಳ್ಳೆಯದು ಎಂದರು.