News Karnataka Kannada
Friday, May 03 2024
ಮಂಗಳೂರು

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಲವ್ ಜಿಹಾದ್ ಹೇಳಿಕೆ ಸಮರ್ಥಿಸಿದ ಶಾಸಕ ಭರತ್ ಶೆಟ್ಟಿ

MANGALURU: BJP MLA Bharath Shetty defends bjp state president Kateel's 'love jihad' remark
Photo Credit : News Kannada

ಮಂಗಳೂರು: ಚರಂಡಿ ಅತ್ತ ಗಮನಹರಿಸದೆ ಲವ್ ಜಿಯಾದ್ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಿ ಎಂದು ಇತ್ತೀಚಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು ಅವರು ನೀಡಿದ್ದ ಹೇಳಿಕೆ ಬಗ್ಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಭರತ್ ಶೆಟ್ಟಿ ಸಮರ್ಥನೆ ಮಾಡಿಕೊಂಡಿದ್ದಾರೆ .

ಸುದ್ದಿಗಾರರ ಜೊತೆ ಮಾತನಾಡಿದ ಅವರು ನಳಿನ್ ಅವರು ಎಲ್ಲಿಯೂ ಕೂಡ ರಸ್ತೆ ವಿಚಾರ ಬಿಟ್ಟುಬಿಡಿ ಎಂದು ಹೇಳಿಲ್ಲ ರಸ್ತೆ ಚರಂಡಿ ಅಭಿವೃದ್ಧಿ ಕೆಲಸ ಮಾಡಿಸುವುದು ಚುನಾಯಿತ ಪ್ರತಿನಿಧಿಗಳು , ಅದರೊಂದಿಗೆ ಕಾರ್ಯಕರ್ತರು ಸಮಾಜದ ಸ್ವಾಸ್ತ್ಯ ಕೆಡದಂತ್ತೆ ಕೆಲಸ ಮಾಡಿ ಎಂದು ಹೇಳಿದ್ದಾರೆ .ಸಾಮಾಜಿಕ ಪಿಡುಗುಗಳ ಬಗ್ಗೆಯೂ ಕಾರ್ಯಕರ್ತರು ಗಮನ ಹರಿಸಿಕೊಂಡು ಕೆಲಸ ಮಾಡಿರಿ ಎಂದು ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು

ಇನ್ನು ಸಿದ್ದರಾಮಯ್ಯನವರು ಹಿರಿಯ ನಾಯಕರು ಅವರು ಜವಾಬ್ದಾರಿಯುತವಾಗಿ ಮಾತನಾಡಬೇಕು ಯಾರನ್ನು ಕೂಡ ನಿಂದಿಸುವಾಗ ಅವರ ಎಚ್ಚರ ವಹಿಸಬೇಕು ಎಂದು ಭರತ್ ತಿರುಗೇಟು ನೀಡಿದರು . ಮುಖ್ಯಮಂತ್ರಿ ಬೊಮ್ಮಾಯಿಗೆ ಸಿದ್ದರಾಮಯ್ಯ ಅವರು ನಾಯಿಮರಿಗೆ ಹೋಲಿಸಿದ ವಿಚಾರಕ್ಕೆ ಸಂಬಂಧಿಸಿ, ನಾಯಿ ಕತ್ತೆ ಹೆಸರನ್ನು ಕರೆಯುವುದು ಒಳ್ಳೆಯ ಟೇಸ್ಟ್ ಅಲ್ಲ ನಾಯಿ ಅತ್ಯಂತ ನಂಬಿಕೆಯ ಹೆಸರಾಗಿರುವ ನಾಯಿ , ಆದರೆ ಅವರು ನಾಯಿಗೆ ಹೋಲಿಸಿದರೆ ಅದು ಒಳ್ಳೆಯ ವಿಷಯ ಕೆಟ್ಟದಾಗಿ ಯೋಚಿಸಿದರೆ ಅದು ಕೆಟ್ಟ ವಿಚಾರ ಅವರು ಕೂಡ ನಾಯಿ ಆದ್ರೆ ಒಳ್ಳೆಯದು ನಾಯಿಯಂತೆ ತನ್ನ ಪಕ್ಷಕ್ಕೆ ಪ್ರಾಮಾಣಿಕವಾಗಿ ಇದ್ದರೆ ಒಳ್ಳೆಯದು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು