ಮಂಗಳೂರು: ಮಹಾನಗರ ಪಾಲಿಕೆಯ ಮರೋಳಿ ವಾರ್ಡಿನಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುವ ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್, ಸುವರ್ಣ ರೆಸಿಡೆನ್ಸಿ, ಮರೋಳಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ಬಳಿಯಿರುವ ರಾಜಕಾಲುವೆ ಅಭಿವೃದ್ಧಿಗೆ 50 ಲಕ್ಷ ರೂಪಾಯಿ ಹಾಗೂ ಕನಪತಗ್ಗು ಪರಿಸರದ ರಾಜಕಾಲುವೆ ಅಭಿವೃದ್ಧಿಗೆ 50 ಲಕ್ಷ ರೂಪಾಯಿ ಅನುದಾನ ಸಣ್ಣ ನೀರಾವರಿ ಇಲಾಖೆಯಿಂದ ಬಿಡುಗಡೆಗೊಳಿಸಲಾಗಿದೆ. ಈ ಪರಿಸರದ ಮುಖಂಡರ ಬೇಡಿಕೆಯಂತೆ ಸ್ಥಳೀಯ ಸಮಸ್ಯೆಗಳನ್ನು ಮನಗಂಡು ಅನುದಾನ ಒದಗಿಸಲಾಗಿದ್ದು ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಕಿಶೋರ್ ಕೊಟ್ಟಾರಿ, ಕಾರ್ಪೋರೇಟರ್ ಕೇಶವ ಮರೋಳಿ, ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಕಿರಣ್ ಮರೋಳಿ, ಕೃಷ್ಣ ಎಸ್.ಆರ್, ಜಗದೀಶ್ ಶೆಣೈ, ಜಗನ್ನಾಥ್ ಆಡುಮನೆ, ಪ್ರಶಾಂತ್ ಮರೋಳಿ, ರಾಘು ಮರೋಳಿ, ಅರುಣ್ ಶೆಟ್ಟಿ, ಸರಳ, ಮಾಲತಿ, ಬೋಜ ಅಮೀನ್, ಅನಿತಾ, ಕಮಲಾಕ್ಷ ಸುವರ್ಣ ನಟ್ಟಿಮನೆ, ತೇಜಾಕ್ಷ ಸುವರ್ಣ ನಟ್ಟಿಮನೆ, ಸಂತೋಷ್ ಬಂಗೇರೆ ಓಂ ಪ್ರಸಾದ್, ದಿವಾಕರ ನಟ್ಟಿಮನೆ, ಪವಿತ್ರ ಸುವರ್ಣ, ಹರಿಣಾಕ್ಷ ಭಂಡಾರಿ, ಯಶವಂತ, ರಾಜೇಶ್ ಆಲಂಗಾರ್, ಸಾರಿಕಾ ಸುವರ್ಣ, ವಿಶ್ವನಾಥ್, ಪಲ್ಲವಿ, ಮೆಲ್ವಿನ್, ಸ್ಥಳೀಯ ಮುಖಂಡರು ಹಾಗೂ ಪರಿಸರದ ಸಾರ್ವಜನಿಕರು ಉಪಸ್ಥಿತರಿದ್ದರು.