ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಇನಾಯತ್ ಅಲಿ ಅವರಿಗೆ ಟಿಕೇಟ್ ಖಚಿತ ಎಂಬ ವಾತಾವರಣವಿದ್ದು, ಮೊಹಿಯುದ್ದೀನ್ ಬಾವಾ ಅವರು ಟಿಕೇಟ್ಗಾಗಿ ಭಾರಿ ಕಸರತ್ತು ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೊಹಿಯುದ್ದೀನ್ ಬಾವಾ ದೆಹಲಿಗೆ ಭಾನುವಾರ ತೆರಳಿದ್ದು, ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ನನ್ನ ಎಲ್ಲಾ ಆತ್ಮೀಯ ಕಾರ್ಯಕರ್ತರು ಹಾಗೂ ಹಿತೈಷಿಗಳಿಗೆ ನನ್ನ ನಮಸ್ಕಾರ ಮಂಗಳವಾರ ಕಾಂಗ್ರೆಸ್ ಪಟ್ಟಿ ಬಿಡುಗಡೆಗೊಳ್ಳಲಿದೆ. ಈ ಕಾರಣಕ್ಕಾಗಿ ನಾನು ದೆಹಲಿಗೆ ಪ್ರಯಾಣಬೆಳೆಸಿದ್ದೇನೆ. ನಿಮ್ಮೆಲ್ಲರ ಪ್ರಾರ್ಥನೆ ನನ್ನ ಜೀವನದ ಬಹುದೊಡ್ಡ ಶಕ್ತಿ. ದೇವರ ಅನುಗ್ರಹದಿಂದ ಕಾಂಗ್ರೆಸ್ ಪಕ್ಷದ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾನು ಆಯ್ಕೆಯಾಗುವಂತೆ ನೀವೆಲ್ಲರೂ ನನಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಬೇಕು ಎಂದು ನಿಮ್ಮೆಲ್ಲರಲ್ಲಿ ವಿನಂತಿಸುತ್ತೇನೆ ಎಂದು ತಿಳಿಸಿದ್ದಾರೆ.