ತುಮಕೂರು: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಸಂಬಂಧ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಚೆಕ್ಪೋಸ್ಟ್ಗಳನ್ನು ನಿರ್ಮಿಸಲಾಗಿದ್ದು, ಎಫ್.ಎಸ್.ಟಿ.ಮತ್ತು ಎಸ್ಎಸ್ಟಿ ತಂಡಗಳು ಕಾರ್ಯ ನಿರ್ವಹಿಸುತ್ತಿರುತ್ತವೆ.
ಇಂದು ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಜೋನಿಗರಹಳ್ಳಿ ಕ್ರಾಸ್ ಚೆಕ್ಪೋಸ್ಟ್ನಲ್ಲಿ ತೋವಿನಕೆರೆ ಕಡೆಯಿಂದ ಸಿ.ಡಿ. ಡಿಲಕ್ಸ್ ದ್ವಿಚಕ್ರ ವಾಹನದಲ್ಲಿ ಬಂದ ಶ್ರೀ ಮುನಿಸ್ವಾಮಿ ಬಿನ್ ಕಾಟಯ್ಯ ರವರನ್ನು ನಿಲ್ಲಿಸಿ ತಪಾಸಣೆ ನಡೆಸಲಾಗಿ ರೂ. 1,20,000 ಹಣವಿದ್ದು, ಈ ಕುರಿತು ಸದರಿಯವರು ಸಮಂಜಸವಾದ ಉತ್ತರವನ್ನು ನೀಡದೆ ಇರುವುದರಿಂದ ಎಸ್ಎಸ್ಟಿ ತಂಡದ ಸದಸ್ಯರು ಸದರಿಯವರನ್ನು ಹಾಗೂ ಹಣವನ್ನು ವಶಕ್ಕೆ ಪಡೆದು ಎಫ್ಐಆರ್ ಸಂಖ್ಯೆ ಜಿಎಸ್ಸಿ ನಂ. 131/2023ರ ರೀತ್ಯಾ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.