ಮಂಗಳೂರು: ಬಂದೂಕಿನಿಂದ ಕಡವೆ ಬೇಟೆಯಾಡುತ್ತಿದ್ದವನನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದಲ್ಲಿ ನಡೆದಿದೆ ಕೆ.ಅಶೋಕ್ ಕುಮಾರ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ಚಾರ್ಮಾಡಿ ಅರಣ್ಯದಲ್ಲಿ ಕಡವೆ ಭೇಟೆ ಆಡಿ ಮಾಂಸ ಇಟ್ಟುಕೊಂಡಿದ್ದ. 4 ಕೆ.ಜಿ ಕಡವೆ ಮಾಂಸ, ಕಡವೆ ಚರ್ಮ, ಸಿಂಗಲ್ ಬ್ಯಾರಲ್ ಬಂದೂಕು, ಒಂದು ಗುಂಡು, ಭೇಟೆಯಾಡಿದ್ದ ಖಾಲಿ ಗುಂಡುಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.