ಮಂಗಳೂರು: ಮಹಾನಗರ ಪಾಲಿಕೆಯ ಬಿಜೈ, ಕದ್ರಿ, ಶಿವಭಾಗ್, ಕೋರ್ಟ್ ಮತ್ತು ಕೊಡಿಯಾಲ್ ಬೈಲ್ ವಾರ್ಡುಗಳ ವ್ಯಾಪ್ತಿಯಲ್ಲಿ ಮತದಾರರ ಗುರುತು ಚೀಟಿಗೆ ಆಧಾರ್ ಲಿಂಕ್ ಮಾಡುವ, ಮತ್ತು ಇತರ ದಾಖಲೆಗಳಿಗೆ ಲಿಂಕ್ ಮಾಡುವ ಕಾರ್ಯಕ್ರಮ ಮತ್ತು ಹೊಸ ಮತದಾರರ ಸೇರ್ಪಡೆ, ಇನ್ನಿತರ ಮತದಾರರ ಪಟ್ಟಿಯ ಕಾರ್ಯಕ್ರಮಗಳನ್ನು ಮಾಜಿ ಶಾಸಕ ಶ್ರೀ ಐವನ್ ಡಿ ಸೋಜರವರು ಬಿಜೈ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ವಾರ್ಡುಗಳಲ್ಲಿ ಈ ಶಿಬಿರಗಳನ್ನು ಏರ್ಪಾಡಿಸುವ ಮೂಲಕ ಚುನಾವಣಾ ಆಯೋಗ ನಿರ್ದೇಶನದಂತೆ ಆಧಾರ್ ಲಿಂಕ್ ಕಾರ್ಯಕ್ರಮ ಏರ್ಪಾಡು ಮಾಡಿ, ಮತದಾರರ ಪಟ್ಟಿಯಲ್ಲಿರುವ ಅಕ್ರಮ ತಡೆಯಲು ಲಿಂಕ್ ಯೋಜನೆ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಲಿಂಕ್ ಕಾರ್ಯಕ್ರಮ ಕಡ್ಡಾಯವಾಗುವ ಪರಿಸ್ಥಿತಿ ಬರಬಹುದಾಗಿದೆ ಎಂದು ಶ್ರೀ ಐವನ್ ಡಿ ಸೋಜರವರು ಈ ಸಂದರ್ಭದಲ್ಲಿ ಮಾತಾನಾಡುತ್ತಾ ತಿಳಿಸಿದರು. ಇದೋಂದು ನಿರಂತರ ಕಾರ್ಯಕ್ರಮವಾಗಿದ್ದು, ಎಲ್ಲರೂ ಭಾಗವಹಿಸಬೇಕೆಂದು ಕೋರಿದರು.
ಕಾರ್ಯಕ್ರಮದ ಉದ್ಘಾಟನೆಯ ಸಮಾರಂಭದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ, ಸ್ಥಳೀಯ ಕಾಪೆರ್Çೀರೇಟರು ಲ್ಯಾನ್ಸಿ ಲೋಟ್ ಪಿಂಟೊ, ಶಶಿಧರ್ ಹೆಗ್ಡೆ, ಮಾಜಿ ಕಾರ್ಪರೇಟರ್ ಭಾಸ್ಕರ್ ರಾವ್, ಡಿ.ಕೆ ಅಶೋಕ್, ಪ್ರಕಾಶ್ ಸಾಲಿಯಾನ್, ಕಾಂಗ್ರೆಸ್ ವಾರ್ಡ್ ಅಧ್ಯಕ್ಷೆ ಶಾಂತಲಾ ಗಟ್ಟಿ, ಚರ್ಚಿನ ಧರ್ಮಗುರುಗಳಾದ ರೆ.ಫಾ.ಜೆ.ಬಿ.ಸಲ್ದಾನ, ಚರ್ಚ್ ಉಪಾಧ್ಯಕ್ಷ ಅಶೋಕ್ ಪಿಂಟೊ, ಕಾರ್ಯದರ್ಶಿ ಪ್ರೀತಿ ಗೋಮ್ಸ್, ಆ್ಯಸ್ಟಿನ್, ರೆಸ್ಲಿನ್ ಮಸ್ಕರೇನಸ್, ಕಾಂಗ್ರೆಸ್ ನಾಯಕರುಗಳಾದ ಆಲಿಸ್ಟನ್ ಡಿ ಕುನ್ಹಾ, ವಿಶ್ವಾಸ್ ದಾಸ್, ಪ್ರಮೋದ್ ಸಾಲಿಯಾನ್, ಮಮತಾ ಶೆಟ್ಟಿ, ಮಂಜುಳಾ ನಾಯಕ್, ಸಮರ್ಥ್ ಭಟ್, ಚೇತನ್ ಕುಮಾರ್ ಉರ್ವ, ರೂಪ ಚೇತನ್, ನೀರಜ್ ಪಾಲ್, ನವಾಜ್ ಶೆಟ್ಟಿ, ಹೈದರ್ ಬೋಳಾರ್, ವಾರ್ಡ್ ಅಧ್ಯಕ್ಷ ವರುಣ್, ಸತೀಶ್ ಪೆಂಗಳ್, ಜೇಮ್ಸ್ ಪ್ರವೀಣ್, ಮೀನಾ ಟೆಲ್ಲಿಸ್, ಮಾರ್ಸೆಲ್ ಮೊಂತೆರೊ, ಅಬಿಬುಲ್ಲ, ಸಲೀಂ ಮೆಕ್ಕ, ಶಶಿ ಬೋಳೂರು, ಹುಸೈನ್ ಕಾಟಿಪಳ್ಳ, ಬಾಜಿಲ್ ರೋಡ್ರಿಗಸ್, ಮಹೇಶ್ ಕೋಡಿಕಲ್, ಪಿಯುಸ್ ಮೊಂತೆರೊ, ಸಿರಿಲ್ ಡಿ ಸೋಜ, ಲೆಸ್ಲಿ ಮಸ್ಕರೇನಸ್, ಆನಂದ್ ಸೋನ್ಸ್, ಸಿರಾಜ್ ಬಜ್ಪೆ, ನಿಸಾರ್, ಉದಯ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಆಲಿಸ್ಟನ್ ಡಿಕುನ್ಹಾ ಸ್ವಾಗತಿಸಿದರು, ವಾರ್ಡ್ ಅಧ್ಯಕ್ಷ ವರುಣ್ ಧನ್ಯವಾದ ಸಮಾರ್ಪಿಸಿದರು.