ಮಂಗಳೂರು: ಐಡಿಎ ದಕ್ಷಿಣ ಕನ್ನಡ ಬ್ರಾಂಚ್ ನ ವತಿಯಿಂದ “ಇನ್ನೋವೆಟಿವೇ ಟೆಕ್ನಾಲಜೀಸ್ ಇನ್ ಡೆಂಟಲ್ ಪೇಷಂಟ್ ಕೇರ್”ಈ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ನಗರದ ಹೋಟೆಲ್ ಮಾಯಾ ಇಂಟರ್ನ್ಯಾಷನಲ್ ನಲ್ಲಿ ನಡೆಸಲಾಯಿತು.
ಇದನ್ನು ಐಡಿಎ ದಕ್ಷಿಣ ಕನ್ನಡ ಬ್ರಾಂಚ್ ನ ಅಧ್ಯಕ್ಷರಾದ ಡಾ.ಪದ್ಮರಾಜ್ ಹೆಗ್ಡೆ ಯವರು ಉದ್ಘಾಟಿಸಿದರು. ಮುಖ್ಯ ಸಂಪನ್ಮೂಲ ವ್ಯೆಕ್ತಿಯಾಗಿ ಡಾ.ಪ್ರಮೋದ್ ಕೆ ಥಾಮಸ್ ಮುಂಬೈ,ಇವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಇಂದಿನ ಆದುನಿಕ ದಿನಗಳಲ್ಲಿ ಹೊಸ ಡಿಜಿಟಲ್ ಟೆಕ್ನಾಲಜೀಸ್ಸ ಅನ್ನು ದಂತ ವೈದ್ಯಕೀಯ ದಲ್ಲಿ ರೋಗಿಗಳ ನಿರ್ವಹಣೆ ಹಾಗು ಡೆಂಟಲ್ ಕ್ಲಿನಿಕ್ಸ್ ನಲ್ಲಿ ಇದರ ಉಪಯೋಗ, ಈ ವಿಷಯದ ಬಗ್ಗೆ ಅವರು ಈ ಸಂದರ್ಭದಲ್ಲಿ ವಿವರಿಸಿದರು. ಐ ಡಿ ಏ ದಕ್ಷಿಣ ಕನ್ನಡ ಬ್ರಾಂಚ್ ನ ಕಾರ್ಯದರ್ಶಿ ಡಾ. ಭರತ್ ಪ್ರಭು ಹಾಗು ಖಜಾಂಚಿ ಡಾ.ಪ್ರಸನ್ನ ಕುಮಾರ್ ರಾವ್ ರವರು ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ದಂತವೈದ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.