ಮಂಗಳೂರು: ಪ್ರಧಾನಿ ಸಮಾವೇಶದಲ್ಲಿ ನಾಲ್ಕನೇ ತರಗತಿಯ ಬಾಲಕಿಯೊಬ್ಬಳು ಕಳೆದುಹೋಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ, ಕೊನೆಗೆ ಮಂಗಳೂರು ಪೊಲೀಸರ ಸಮಯಪ್ರಜ್ಞೆಯಿಂದ ಬಾಲಕಿಯನ್ನು ಪತ್ತೆ ಹಚ್ಚಿ ಪಾಲಕರ ಸುಪರ್ದಿಗೆ ಒಪ್ಪಿಸಿದರು.
ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯೋತಿನಗರದ ಯುಮುನಕ್ಕ ಹಾಗೂ ದೇವಕಿ ದಂಪತಿಯ ಹತ್ತು ವರ್ಷದ ಬಾಲಕಿ ಪೂಜಾ ಮೇಟಿ ಮೋದಿ ಸಮಾವೇಶಕ್ಕೆ ಪೋಷಕರೊಂದಿಗೆ ಬಂದಿದ್ದಳು.
ಆದರೆ ಅಚಾನಕ್ಕಾಗಿ ಜನಜಂಗುಳಿಯಲ್ಲಿ ಪೋಷಕರ ಕೈತಪ್ಪಿಹೋಗಿ ಆತಂಕ ಸೃಷ್ಟಿಸಿದ ಒಬ್ಬಂಟಿ ವಿದ್ಯಾರ್ಥಿಯನ್ನು ಗಮನಿಸಿದ ಮಂಗಳೂರು ನಗರ ಸಂಚಾರಿ ಎಸಿಪಿ ಗೀತಾ ಕುಲಕರ್ಣಿ ಬಾಲಕಿಯನ್ನು ವಿಚಾರಿಸಿ ಪೋಷಕರನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ಒಪ್ಪಿಸಿದ್ದಾರೆ.
ಪ್ರಧಾನಿ ಕಾರ್ಯಕ್ರಮದ ಭದ್ರತೆಯ ಒತ್ತಡದ ನಡುವೆಯೂ ಪುಟ್ಟ ಬಾಲಕಿಯನ್ನು ಪೋಷಕರ ಮಡಿಲಿಗೆ ಸೇರಿಸಿದ ಮಂಗಳೂರು ಪೊಲೀಸರ ಸಮಯೋಜಿತ ಕಾರ್ಯ ವ್ಯಾಪಕ ಪ್ರಶಂಸೆ ಕಾರಣವಾಗಿದೆ