ಬಂಟ್ವಾಳ: ಸಜೀಪ ಮುನ್ನೂರು ನಂದಾವರದಲ್ಲಿ ಗುಡ್ಡ ಕುಸಿತ ದುರಂತ ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಎಸ್ಡಿಪಿ ಐ ಬಂಟ್ವಾಳ ಆಗ್ರಹಿಸಿದೆ.
ಸಜೀಪ ಮುನ್ನೂರು ಗ್ರಾಮದ ನಂದಾವರ ಎಂಬಲ್ಲಿ ಇಂದು ಬೆಳಿಗ್ಗೆ ಗುಡ್ಡ ಕುಸಿದು ಮನೆ ಮೇಲೆ ಬಿದ್ದು ಕೂಲಿ ಕಾರ್ಮಿಕರಾದ ಮೊಹಮ್ಮದ್ ಎಂಬವರ ಪತ್ನಿ ಝರೀನಾ ಮೃತಪಟ್ಟಿದ್ದು ಅವರ ಮಗಳು ಸಫಾ ಎಂಬವರು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ದುರಂತಕ್ಕೆ ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದು, ಮತ್ತು ಈ ದುರಂತದಿಂದ ಮೃತಪಟ್ಟ ಮಹಿಳೆಯ ಬಡ ಕೂಲಿ ಕಾರ್ಮಿಕ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಹಾಗೂ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಫಾ ಎಂಬಾಕೆಯ ಸಂಪೂರ್ಣ ಚಿಕಿತ್ಸೆಯ ವೆಚ್ಚವನ್ನು ಜಿಲ್ಲಾಡಳಿತವೇ ಬರಿಸಬೇಕು ಮತ್ತು ಸಂಪೂರ್ಣ ಜಖಂ ಗೊಂಡ ಮನೆಯ ದುರಸ್ಥಿ ವೆಚ್ಚವನ್ನು ಸರಕಾರ ಭರಿಸಬೇಕೆಂದು ಎಸ್ ಡಿ ಪಿ ಐ ಬಂಟ್ವಾಳ ಕ್ಷೇತ್ರ ಸಮಿತಿಯು ಆಗ್ರಹಿಸುತ್ತಿದೆ.
ದುರಂತ ನಡೆದ ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿ ವಿಧ್ಯಾರ್ಥಿನಿ ಸಫಾ ಎಂಬಾಕೆಯನ್ನು ರಕ್ಷಿಸಿದ ನಂದಾವರದ ನಾಗರಿಕರನ್ನು, ಬಂಟ್ವಾಳ ತಾಲೂಕು ರಕ್ಷಣಾ ಕಾರ್ಯಾಚರಣೆ ತಂಡವನ್ನು ಎಸ್ ಡಿ ಪಿ ಐ ಅಭಿನಂದಿಸುತ್ತದೆ.