ಮಂಗಳೂರು: ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಮಂಗಳೂರು ಇದರ 42 ನೂತನ ಯೋಜನೆ “ಅಧಿರ” ವಾಣಿಜ್ಯ ಮತ್ತು ವಸತಿ ಸಂಕೀರ್ಣ ಮಂಗಳೂರಿನ ಉರ್ವ ಶ್ರೀ ಮಾರಿಯಮ್ಮ ದೇವಾಲಯ ಬಳಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮಕ್ಕೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ಎಂಎಲ್ಸಿ ಹರೀಶ್ ಕುಮಾರ್, ಮಂಗಳೂರು ಮನಪಾ ಮೇಯರ್ ಸುಧಿರ್ ಶೆಟ್ಟಿ ಸೇರಿ ದೀಪಬೆಳಗಿ ಚಾಲನೆ ನೀಡಿದರು.
ಮಂಗಳೂರು ಮನಪ ಸದಸ್ಯ ಗಣೇಶ್ ಕುಲಾಲ್, ಕರ್ಣಾಟಕ ಬ್ಯಾಂಕ್ ಜಿ ಎಂ ರವಿಚಂದ್ರನ್ ಎಸ್, ಮಂಗಳೂರು ಮನಪಾ ಮಾಜಿ ಮೇಯರ್ ಗಳಾದ ಪ್ರೇಮಾನಂದ್ ಶೆಟ್ಟಿ, ಶಶಿಧರ್ ಹೆಗ್ಡೆ, ಭಾಸ್ಕರ್ ಮೊಯ್ಲಿ, ಮಂಗಳೂರು ಎಸಿಪಿ ಗೀತಾ ಕುಲಕರ್ಣಿ, ಖ್ಯಾತ ಉದ್ಯಮಿ ಶಾಂಭಶಿವ ರಾವ್, ಲ್ಯಾಂಡ್ ಟ್ರೆಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ ಮುಖ್ಯಸ್ಥ ಶ್ರೀನಾಥ್ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.