ಕುಂದಾಪುರ: ಕಳದೆರಡು ವರ್ಷಗಳ ಕಾಲ ಆರ್ಭಟಿಸಿದ ಕೋವಿಡ್ ಸಾಂಕ್ರಮಿಕ ರೋಗದಿಂದ ಜನರ ಬದುಕಿನ ಸಂತಸದ ದಿನಗಳನ್ನು ಕಿತ್ತುಕೊಂಡಿದೆ ಪ್ರಸ್ತುತ ವರ್ಷದಲ್ಲಿ ದೇವರ ದಯೆಯಿಂದ ಕೊರೊನಾದ ಅಡೆತಡೆ ಇಲ್ಲದೆ ನಾಡಿನಲ್ಲಿ ಉತ್ಸವಗಳು, ಹಬ್ಬ ಹರಿದಿನಗಳು, ದೇವತಾ ಕಾರ್ಯಗಳು ವಿಜೃಂಭಣೆಯಿಂದ ನಡೆಯುತ್ತಿದೆ ಕರಾವಳಿ ಭಾಗದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಸ್ಪಂದನ ಯುವ ಸಂಘ ಮಂಕಿ ಗುಜ್ಜಾಡಿ ಅದರ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಮಂಕಿ ಶಾಲೆ ಆಟದ ಮೈದಾನದಲ್ಲಿ ಶನಿವಾರ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಉದ್ಯಮಿ ನಾರಾಯಣ ಟಿ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸ್ಪಂದನ ಯುವ ಸಂಘ ಊರಿನಲ್ಲಿ ಒಳ್ಳೆ ಕೆಲಸಗಳನ್ನು ಮಾಡುವುದರ ಮೂಲಕ ಗುರುತಿಸಿಕೊಂಡಿದೆ ಯಾವುದೆ ರೀತಿಯ ರಾಜಕೀಯ ಬೆಳವಣಿಗೆಗೆ ಸ್ಪಂದನೆ ನೀಡದೆ ಕೆಲಸ ಮಾಡಬೇಕು ಎಂದರು.
ಸ್ಪಂದನ ಯುವ ಸಂಘದ ಅಧ್ಯಕ್ಷ ರಘು ಎಮ್, ನಿವೃತ್ತ ಶಿಕ್ಷಕ ಶಂಕರ ಬಿಲ್ಲವ ಮರವಂತೆ, ಗುಜ್ಜಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ತಮ್ಮಯ್ಯ ದೇವಾಡಿಗ, ಡಿಎಸ್ಎಸ್ ಸಂಚಾಲಕ ಮಂಜುನಾಥ, ನಾಗರಾಜ ಪುತ್ರನ್, ಪರಮೇಶ್ವರ ಶ್ರೀಯಾನ್, ಪುಂಡಲೀಕ ಮಂಕಿ, ಯುವ ಸಂಘದ ಗೌವಾಧ್ಯಕ್ಷ ಕಿಶೋರ್ ದೇವಾಡಿಗ ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ಶಂಕರ ಬಿಲ್ಲವ ಮರವಂತೆ, ಸುರೇಂದ್ರ ನಾವುಡ ಮಂಕಿ ಹಾಗೂ ಕೆ.ಗೋಪಾಲ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸತೀಶ ಪಿ ಸ್ವಾಗತಿಸಿದರು.ಸುಂದರ ಜಿ ನಿರೂಪಿಸಿದರು.ನಿತಿನ್ ಎಂ ವಂದಿಸಿದರು. ಡ್ಯಾನ್ಸ್ ಧಮಾಕ 2023 ಕಾರ್ಯಕ್ರಮ ನಡೆಯಿತು.