ಮಂಗಳೂರು, ಅ.27: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ ಟಿಸಿ) ಅ.27ರ ಗುರುವಾರದಿಂದ ಬಿಜೈ ಟರ್ಮಿನಸ್ ನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಎಂಐಎ) ಬಸ್ಸುಗಳನ್ನು ಸಂಚರಿಸಲಿದೆ.
ಮೂಲಗಳ ಪ್ರಕಾರ ಉಡುಪಿಯ ಮಣಿಪಾಲದಿಂದ ಕಾವೂರು ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಮತ್ತೊಂದು ಬಸ್ ಸಂಚರಿಸಲಿದೆ.
ಕೆಲವು ವರ್ಷಗಳ ಹಿಂದೆ ನೀಡಲಾಗುತ್ತಿದ್ದ ಸೇವೆಗಳನ್ನು ಆದಾಯದ ಕೊರತೆಯಿಂದಾಗಿ ಸ್ಥಗಿತಗೊಳಿಸಲಾಯಿತು. ಪ್ರಯಾಣಿಕರ ಮನವಿಗೆ ಸ್ಪಂದಿಸಿ, ಮತ್ತೆ ಆರಂಭಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರ ಆದೇಶದಲ್ಲಿ ತಿಳಿಸಲಾಗಿದೆ.