ಕೊಕ್ಕಡ: ಕಬ್ಬು ಅಭಿವೃದ್ಧಿ, ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಜ.1ರಂದು ಕಾಯರ್ತಡ್ಕ ಕಳೆಂಜದ ನಂದಗೋಕುಲ ಗೋಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು.
ಗೋಶಾಲೆಯ ಚಟುವಟಿಕೆ ಮತ್ತು ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ವೈಯಕ್ತಿಕವಾಗಿ ಮತ್ತು ತಮ್ಮ ಇಲಾಖೆ, ಸರಕಾರದಿಂದ, ಅನುದಾನ ಒದಗಿಸುವ ಕುರಿತು ಭರವಸೆ ನೀಡಿದರು.
ಗೋ ಶಾಲೆಯ ಟ್ರಸ್ಟಿನ ಅಧ್ಯಕ್ಷ ಡಾ. ಎಂ.ಎಂ. ದಯಾಕರ್, ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ,ಟ್ರಸ್ಟಿ ನವೀನ್ ನೆರಿಯ,ರಮೇಶ್ ಪ್ರಭು ಕಳೆಂಜ ಪಂಚಾಯಿತಿ ಅಧ್ಯಕ್ಷ ಪ್ರಸನ್ನ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಗೋ ಶಾಲೆ ವತಿಯಿಂದ ಸಚಿವರನ್ನು ಗೌರವಿಸಲಾಯಿತು. ಗೋಶಾಲೆಯ ಮ್ಯಾನೇಜರ್ ಗಳಾದ ಕೀರ್ತಿರಾಜ್ ಮತ್ತು ಶ್ರೀಶ ಭಟ್ ಅವರನ್ನು ಸಚಿವರು ಸನ್ಮಾನಿಸಿದರು.