ಮಂಗಳೂರು: ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ತನ್ನ ಸುವರ್ಣ ಮಹೋತ್ಸವ ಜನವರಿ 9 ರಂದು ಆಚರಣೆ ಮಾಡುವ ಪ್ರಯುಕ್ತ ಆಹ್ವಾನ ಪತ್ರಿಕೆಯನ್ನು ಮಂಗಳೂರು ದಕ್ಷಿಣದ ಕೊಂಕಣಿ ಮಾತೃಭಾಷೆಯ ಶಾಸಕರಾದ ವೇದವ್ಯಾಸ ಕಾಮತ್ ತನ್ನ ಕಚೇರಿಯಲ್ಲಿ ಬಿಡುಗಡೆ ಮಾಡಿ ಶುಭಹಾರೈಸಿದರು.
ಕೊಂಕಣಿ ಭಾಷೆಗೆ ನಲವತ್ತು ಹೆಚ್ಚು ಪ್ರಭೇದಗಳು, ಎಲ್ಲಾ ಧರ್ಮದ ಜನರು ಮಾತನಾಡತ್ತಾರೆ, ನಾಲ್ಕೈದು ಲಿಪಿಯಲ್ಲಿ ಬರವಣಿಗೆ ಮಾಡುತ್ತಾರೆ . ಕೊಂಕಣಿ ಜನರು ಭಾಷೆಗಾಗಿ ಜೊತೆಯಲ್ಲಿ ಐವತ್ತು ಐತಿಹಾಸಿಕ ವರ್ಷಗಳ ಪಯಣದ ಸಂಭ್ರಮ ತನ್ನ ಮಂಗಳೂರು ನಗರದಲ್ಲಿ ಆಚರಣೆ ಆಗುತ್ತಿದೆ ಎನ್ನುವ ಸಂತಸವಾಗಿದೆ ಎಂದರು.
ದಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ತಾನೂ ಕೊಂಕಣಿ ಮಾತೃಭಾಷೆಯವ ಆದ್ದರಿಂದ ಇದೊಂದು ನನ್ನ ಮನೆಯ ಕಾರ್ಯಕ್ರಮ ಎಂದರು.
ಕೆಬಿಎಮ್ ಕೆ ಅಧ್ಯಕ್ಷ ಕೆ ವಸಂತ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ವಂದಿಸಿದರು. ಖಜಾಂಚಿ ಸುರೇಶ್ ಶೆಣೈ, ಕಾರ್ಯಕಾರಿ ಸದಸ್ಯರಾದ ಡಾ ಅರವಿಂದ್ ಶಾನ್ಭಾಗ್ ಉಪಸ್ಥಿತರಿದ್ದರು.